ಅಂಕೋಲಾದಲ್ಲಿ ಗಿಡ ಕಡಿಯಬೇಡ ಅಂದಿದ್ದಕ್ಕೆ ಹಲ್ಲೆ

ಅಂಕೋಲಾ: ಬೇರೆಯವರ ತೋಟದಲ್ಲಿನ ಗಿಡ ಕಡಿಯುತ್ತಿದ್ದಾಗ ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಕುರಿತು ತಾಲ್ಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರವಿ ದುರ್ಗಪ್ಪ ಶೃಂಗೇರಿ ಹಲ್ಲೆ ನಡೆಸಿದ ಆರೋಪಿ. ಪಟ್ಟಣದ ಪೂರ್ಣಪ್ರಜ್ಞಾ ಪ್ರೌಢಶಾಲೆಯ ಹತ್ತಿರದ ನಂದನ ರಾಮಚಂದ್ರ ಐಗಳ ಅವರ ತೋಟದಲ್ಲಿನ ಅಕೇಶಿಯಾ ಗಿಡವನ್ನು ರವಿ ಕಡಿಯುತ್ತಿದ್ದ. ಈ ವೇಳೆ ನಂದನ ಅವರ ತೋಟವನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ ನರೇಂದ್ರ ಶಿವಾ ಹುಲಸ್ವಾರ ಯಾಕೆ ಮರವನ್ನು ಕಡಿಯುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸಿಟ್ಟಿನಿಂದ ಹಲ್ಲೆ ನಡೆಸಿ, ಧಮಕಿ ಹಾಕಿದ್ದಾನೆ ಎಂದು ನರೇಂದ್ರ ದೂರು ದಾಖಲಿಸಿದ್ದಾರೆ.