ಫೆ. 8ರಂದು ನಡೆಯಲಿರುವ 10 ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಅಂಕೋಲಾ: ಫೆ. 8ರಂದು ನಡೆಯಲಿರುವ ಹತ್ತನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಪಟ್ಟಣದ ನಾಡವರ ಸಭಾಭವನದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ
ಡಾ.ಮಹೇಶ ಜಿ ಗೋಳಿಕಟ್ಟೆ ಬಿಡುಗಡೆಗೊಳಿಸಿದರು.
ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ಲಾಂಛನವು ಅಂಕೋಲಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ವೈಶಿಷ್ಟತೆಗಳನ್ನು ಪ್ರತಿಬಿಂಬಿಸುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಗೌರವ ಕಾರ್ಯದರ್ಶಿ ಜಗದೀಶ ಜಿ ನಾಯಕ ಹೊಸ್ಕೇರಿ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಮಹಾಂತೇಶ ರೇವಡಿ, ಡಾ.ವಿನಾಯಕ ಹೆಗಡೆ , ಸುಜೀತ ನಾಯ್ಕ, ರಫೀಕ ಶೇಖ್, ಎಂ.ಬಿ ಆಗೇರ, ಡಾ.ಪ್ರಕಾಶ ನಾಯಕ, ಸಂದೀಪ ನಾಯಕ, ಪ್ರಕಾಶ ಕುಂಜಿ ಮುಂತಾದವರು ಉಪಸ್ಥಿತರಿದ್ದರು.