ಕೋಗಿಲಬನದ ಶ್ರೀ.ಮಾರುತಿ ಮಂದಿರದಲ್ಲಿ ಶ್ರೀರಾಮೋತ್ಸವ

ದಾಂಡೇಲಿ : ಸ್ಥಳೀಯ ಕೋಗಿಲಬನದಲ್ಲಿರುವ ಶ್ರೀ.ಮಾರುತಿ ಮಂದಿರದಲ್ಲಿ ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತವಾಗಿ ಶ್ರೀರಾಮೋತ್ಸವ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಸುಧೀರ್ ಶೆಟ್ಟಿ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಚೆನ್ನಬಸಪ್ಪ ಮುರುಗೋಡ ಅವರು ಸರಿಸುಮಾರು 500 ವರ್ಷಗಳ ಹಿಂದೂ ಧರ್ಮ ಪಾಂಧವರ ಕನಸು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಈಡೇರಿದೆ. ಈ‌ ಶುಭ ದಿನ ಹಿಂದೂ ಧರ್ಮ ಬಾಂಧವರ‌ ಜೀವನದ ಅತ್ಯಂತ ಸರ್ವ ಶ್ರೇಷ್ಠವಾದ ದಿನವಾಗಿದೆ ಎಂದರು.

ಶ್ರೀ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಸಾಮೂಹಿಕ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀರಾಮೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.