ದಾಂಡೇಲಿಯ ಶ್ರೀರಾಮಮಂದಿರದಲ್ಲಿ ರಾಮ, ಲಕ್ಷ್ಮಣ ಮತ್ತು ಸೀತೆಯ ವೇಷದಾರಿಗಳಾಗಿ ಮಿಂಚಿದ ಮುದ್ದು‌ ಮಕ್ಕಳು

ದಾಂಡೇಲಿ : ಅಯೋಧ್ಯೆಯ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತವಾಗಿ ದಾಂಡೇಲಿಯ ಬಂಗೂರುನಗರದಲ್ಲಿರುವ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ಮಕ್ಕಳಾದ ಮೋದಿತ್ ಗೌರ್, ಕವೀಶ್ ಗೌರ್ ಮತ್ತು ರಿಯಾ ಕುಲಕರ್ಣಿ ಈ ಮೂವರು ಕ್ರಮವಾಗಿ ರಾಮ, ಲಕ್ಷ್ಮಣ, ಸೀತೆಯ ಪಾತ್ರದಲ್ಲಿ ಮಿಂಚಿ ಎಲ್ಲರ ಗಮನ ಸೆಳೆದರು.