ಸಿದ್ದಾಪುರದಲ್ಲಿ ಜಾತ್ರೋತ್ಸವದ ನಿಮಿತ್ತ ಯಕ್ಷಗಾನ ಪ್ರದರ್ಶನ

ಸಿದ್ದಾಪುರ : ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೋತ್ಸವದ ನಿಮಿತ್ತ ಯಕ್ಷ ತರಂಗಿಣಿ ಸಂಸ್ಥೆಯ ಹಾರ್ಸಿಕಟ್ಟ ಇವರಿಂದ ರಾಜಭದ್ರ ಸೇನೆ ಯಕ್ಷಗಾನ ಪ್ರದರ್ಶನಗೊಂಡಿತು.

ಭಾಗವತ ಕೃಷ್ಣ ಮರಾಠಿ ಅವರ ಸುಮಧುರ ಕಂಠದಲ್ಲಿ ಆಖ್ಯಾನ ಪ್ರದರ್ಶನಗೊಂಡಿದ್ದು ಚಂಡೆಯಲ್ಲಿ ಮಂಜಯ್ಯ ಜೈನ್, ಮದ್ದಲೆಯಲ್ಲಿ ನಾರಾಯಣ ಗುಡ್ದೆ ಕಣ ಸಾತ್ ನೀಡಿದರು.

ಸಂಸ್ಥೆಯ ಕಲಾವಿದರು ನೆರೆದ ಪ್ರೇಕ್ಷಕರ ಮನರಂಜಿಸಿದರು. ಯಕ್ಷ ತರಂಗಿಣಿ ಸಂಸ್ಥಾಪಕ ನಂದನ್ ನಾಯ್ಕ್ ಹಾರ್ಸಿಕಟ್ಟರವರು ತರಬೇತಿಯನ್ನು ನೀಡಿದ್ದರು.