ಬೋರ್ವೆಲ್ ಉದ್ಘಾಟಿಸಿದ ಶ್ರೀ.ವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿಯವರು

ದಾಂಡೇಲಿ : ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ.ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿಡಿ ಹೆಗಡೆ ಹಾಗೂ ಅವರ ಪುತ್ರ ಮಾಜಿ ಶಾಸಕರಾದ ಸುನೀಲ್ ಹೆಗಡೆಯವರು ಕೊಡುಗೆಯಾಗಿ ನಿರ್ಮಿಸಿ‌ ಕೊಟ್ಟ‌ ನೂತನ ಬೋರ್ವೆಲಿಗೆ ಶನಿವಾರ ಗೋಕರ್ಣ ಪರ್ತಗಾಳಿ ಮಠದ ಪರಮಪೂಜ್ಯ ಶ್ರೀ.ವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿಯವರು ವಿಶೇಷ ಪೂಜೆಯನ್ನು ಸಲ್ಲಿಸಿ ಉದ್ಘಾಟಿಸಿದರು.

ಆನಂತರ ಪೂಜ್ಯ ಸ್ವಾಮೀಜಿಯವರು ವಿ.ಡಿ.ಹೆಗಡೆ ಮತ್ತು ಸುನೀಲ್ ಹೆಗಡೆಯವರನ್ನು ಕ್ಷೇತ್ರದ ಪರವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸು‌ನೀಲ್ ಹೆಗಡೆಯವರ ಧರ್ಮಪತ್ನಿ ಸುವರ್ಣಾ ಹೆಗಡೆ, ಸಹೋದರ ವಿಷ್ಣು ಹೆಗಡೆ, ಮಕ್ಕಳಾದ ನಿರೀಕ್ಷಾ ಮತ್ತು‌ ನಯನ್, ಅಳಿಯ ಗೌತಮ್ ನಾಯಕ್, ಬಿಜೆಪಿ ಮುಖಂಡರಾದ ಮಂಗೇಶ್ ದೇಶಪಾಂಡೆ, ರೊಶನ್‌ ನೇತ್ರಾವಳಿ, ಜಿಎಸ್‌ಬಿ ಸಮಾಜದ ಅಧ್ಯಕ್ಷರಾದ ರಾಧಾಕೃಷ್ಣ ಹೆಗಡೆ, ಪ್ರಮುಖರಾದ ಸಚಿನ್ ಕಾಮತ್, ನಿತಿನ್ ದೇಶಪಾಂಡೆ, ಸುರೇಶ ಕಾಮತ್, ಬಾಬಾಣ್ಣ ಶ್ರೀವತ್ಸ, ನವೀನ್ ಕಾಮತ್ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.