ದಾಂಡೇಲಿ ತಾಲ್ಲೂಕಾಡಳಿತದ ಕಾರ್ಯಾಚರಣೆ : ಅಂಬೇವಾಡಿಯಲ್ಲಿ ಕಣಜದ ಗೂಡು ನಾಶ

ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ತಾಲ್ಲೂಕು ಆಡಳಿತ ಸೌಧದ ಸಮೀಪ ಮರವೊಂದರಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿದ್ದ ಬೃಹತ್ ಕಣಜದ ಹುಳಗಳ ಗೂಡನ್ನು ತಾಲ್ಲೂಕಾಡಳಿತದ ಸೂಚನೆಯಂತೆ ನಗರದ ಉರಗ ಪ್ರೇಮಿ ರಜಾಕ್ ಶಾ ಅವರು ಮಂಗಳವಾರ‌ ನಸುಕಿನ ವೇಳೆಯಲ್ಲಿ ಕಾರ್ಯಾಚರಣೆ ನಡೆಸಿ, ಅದನ್ನು ತೆಗೆದು ದೂರದ ಕಾಡಿಗೆ‌ ಬಿಟ್ಟು ಬಂದಿದ್ದಾರೆ.

ಇಲ್ಲಿ ಮರವೊಂದರಲ್ಲಿ ದೊಡ್ಡ ಗಾತ್ರದ ಕಣಜದ ಹುಳಗಳು ಗೂಡು ಕಟ್ಟಿದ್ದವು. ಈ ಹುಳಗಳು ಹೆಚ್ಚಿನ ಸಂಖ್ಯೆಯಲ್ಲಿ ಕಚ್ಚಿದರೆ ಸಾವು ಕೂಡ ಸಂಭವಿಸುವ ಅಪಾಯವಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಹಾಗೂ ವಾಹನಗಳ ಓಡಾಟ ಒಂದೆಡೆಯಾದರೇ, ಹತ್ತಿರದಲ್ಲೆ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲರ, ಆದರ್ಶ ಶಾಲೆಯು ಇರುವುದರಿಂದ ಮತ್ತು ತಾಲ್ಲೂಕು ಆಡಳಿತ ಸೌಧಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಯಾವುದೇ ಅನಾಹುತವಾಗಬಾರದೆಂದು ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ಕಣಜದ ಹುಳಗಳ ಗೂಡನ್‌ಉ ತೆರವುಗೊಳಿಸಲು‌ ಮುಂದಾಗಿದ್ದರು.

ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರ ಸೂಚನೆಯಂತೆ ಸುಭಾಷ್ ನಗರದ ತೌಸೀಪ್ ಸನದಿಯವರ ಕ್ರೈನ್ ಬಳಸಿಕೊಂಡು, ಸುರಕ್ಷಿತಾ ಜಾಕೆಟ್ ಧರಿಸಿ ಕ್ರೈನ್‌ ಮೂಲಕ ಉರಗ ಪ್ರೇಮಿ ರಜಾಕ್ ಶಾ ಅವರು ಕಣಜದ ಹುಳಗಳ ಗೂಡಿನ ಹತ್ತಿರ ಹೋಗಿ, ಸುರಕ್ಷ ಪರಿಕರವನ್ನು ಬಳಸಿ ಕಣಜದ ಹುಳಗಳ ಗೂಡನ್ನು ಮರದಿಂದ ಬೇರ್ಪಡಿಸಿ, ಆನಂತರ ದೂರದ ಕಾಡಿಗೆ ಬಿಟ್ಟು ಬಂದಿದ್ದಾರೆ. ಈ ಕಾರ್ಯಾಚರಣೆಗೆ ಕಪೂರ್ ಅವರು ಸಹಕರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಹಾಗೂ ಆಡಳಿತ ಸೌಧದ ಸಿಬ್ಬಂದಿಗಳು ಉಪಸ್ಥಿತರಿದ್ದು, ರಜಾಕ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.