ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಿಷ್ಠ ಗೊಳಿಸಲು ರೂಪಾಲಿ ಎಸ್. ನಾಯ್ಕ ಕರೆ‌

ಶಿರಸಿ : ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಿಷ್ಠ ಗೊಳಿಸುವ ಮೂಲಕ ನಾವೆಲ್ಲ ಒಟ್ಟಾಗಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಅವರ  ಕೈಯನ್ನು ಮತ್ತಷ್ಟು ಬಲಪಡಿಸೋಣ. ಭಾರತೀಯ ಜನತಾ ಪಾರ್ಟಿಯ  ಪ್ರತಿಯೊಬ್ಬ ಕಾರ್ಯಕರ್ತ ಪಕ್ಷದ ಜೀವಾಳ ಎಂದು ರಾಜ್ಯ ಬೆಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಎಸ್.ನಾಯ್ಕ ಕರೆ ಕೊಟ್ಟಿದ್ದಾರೆ…

ಶಿರಸಿ ದೀನ್‌ ದಯಾಳ್‌ ಭವನದ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರಮುಖ ಸಭೆಯನ್ನುದ್ದೇಶಿಸಿ ಮಾತನಾಡಿದ ನೂತನ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ  ಎಸ್. ನಾಯ್ಕ , ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸೋಣ ಎಂದು ಕರೆ ನೀಡಿದ್ರು. ಈ ವೇಳೆ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ನಾಯಕ ಜೊತೆ ಪ್ರಮುಖರು ಸೇರಿ ರೂಪಾಲಿ ನಾಯ್ಕ ಅವರನ್ನು ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಿದ್ರು..

ಈ ವೇಳೆ ಜಿಲ್ಲಾಧ್ಯಕ್ಷರಾದ  ವೆಂಕಟೇಶ ನಾಯಕ, ಸಂಘಟನಾ ಕಾರ್ಯದರ್ಶಿಯಾದ ಗಣೇಶ್ ರಾವ್, ಜಿಲ್ಲಾ ಉಸ್ತುವಾರಿ ಪ್ರಸನ್ನ ಕೆರಿಕೈ, ಹೊನ್ನಾವರ -ಭಟ್ಕಳ ಕ್ಷೇತ್ರದ ಮಾಜಿ ಶಾಸಕರಾದ  ಸುನೀಲ ನಾಯ್ಕ,  ಜಿಲ್ಲಾ ಪ್ರಮುಖರಾದ  ಗೋವಿಂದ ನಾಯ್ಕ,  ಮೀನುಗಾರ ಪ್ರಕೋಷ್ಟದ ರಾಜ್ಯ ಸಂಚಾಲಕರು, ಹುವಾ ಖಂಡೇಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರು  ಎಸಳೆ, ಹಾಗೂ  ಗುರು ಪ್ರಸಾದ ಹೆಗಡೆ, ವಿಭಾಗ ಸಹ ಪ್ರಭಾರಿ,  ಎನ್.ಎಸ್ ಹೆಗಡೆ ಹಾಗೂ ಬಿಜೆಪಿ ಪ್ರಮುಖರು ಉಪಸ್ಥಿತರಿದ್ರು..