ಅಪಘಾತದಲ್ಲಿ ವಿದ್ಯಾರ್ಥಿ ಸಾವು : ತನಿಖೆಗೆ ಕರವೇ ಮನವಿ

ಹಳಿಯಾಳ : ಡಿಸೆಂಬರ್: 04 ರಂದು ಬೆಳಿಗ್ಗೆ 5 ಗಂಟೆಯಿಂದ 6 ಗಂಟೆಯ ಅವಧಿಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತ ವಾಹನವೊಂದು ವಿದ್ಯಾರ್ಥಿ ಮಂಜುನಾಥ್ ಬಸವರಾಜ ಇಂಗಳಗಿ ಎಂಬಾತನಿಗೆ ಅಪಘಾತ ಪಡಿಸಿ ಆತ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಅಪಘಾತ ಪಡಿಸಿದ ವಾಹನವನ್ನು ಮತ್ತು ಅದರ ಚಾಲಕನನ್ನು ಪತ್ತೆ ಹಚ್ಚದಿರುವುದು ಅತ್ಯಂತ ನೋವು ತಂದಿದೆ.

ಮೊದಲೇ ಮಗನನ್ನು ಕಳೆದುಕೊಂಡ ಆತನ ತಂದೆ, ತಾಯಿ ನಿತ್ಯ ರೋಧಿಸುತ್ತಿದ್ದು, ಈ ಬಡ ಕುಟುಂಬಕ್ಕೆ‌ ನ್ಯಾಯ ದೊರಕಿಸಿಕೊಡಬೇಕಾದ ನಿಟ್ಟಿನಲ್ಲಿ ಈ‌ ಕೂಡಲೆ ಅಪಘಾತ ಪಡಿಸಿದ ವಾಹನ ಮತ್ತು ಚಾಲಕನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಬೇಕೆಂದು ಕರವೇ (ಪ್ರ) ಬಣವು ಮಂಗಳವಾರ ಹಳಿಯಾಳ ಸಿಪಿಐ ಅವರಿಗೆ ಲಿಖಿತ ಮನವಿ ನೀಡಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಕರವೇ(ಪ್ರ) ಬಣದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರವೀಣ್ ಕೊಠಾರಿ, ಸಂಘಟನೆಯ ಹಳಿಯಾಳ ತಾಲೂಕು ಅಧ್ಯಕ್ಷ ಮಂಜುನಾಥ್ ಬೆಕಣಿ, ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಪಂತೋಜಿ, ಮೃತನ ತಂದೆ ಬಸವರಾಜ ಇಂಗಳಗಿ, ರತ್ನಾ.ಬಿ.ಇಂಗಳಗಿ, ಶಾಂತಾ.ಆರ್.ಸುಳ್ಳದ, ನೇತ್ರಾ ಇಂಗಳಗಿ, ನಾಗರಾಜ ಇಂಗಳಗಿ, ಮಹಾದೇವಿ ಇಂಗಳಗಿ, ರುದ್ರಮಣಿ ಪೊಲೀಸ್ ಗೌಡ, ನಾಗರಾಜ ಕುರುಬರ ಮೊದಲಾದವರು ಉಪಸ್ಥಿತರಿದ್ದರು.