ಕುಮಟಾದ ಬಂಡಿವಾಳದಲ್ಲಿ ನೂತನವಾಗಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ….‌

ಕುಮಟಾ : ತಾಲೂಕಿನ ಅಳಕೋಡ್ ಗ್ರಾಮ ಪಂಚಾಯತ ವ್ಯಾಪ್ತಿಯ ಬಂಡಿವಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದ್ರು.

ಬಳಿಕ ದಿನಕರ ಶೆಟ್ಟಿ ಊರಿನ ನೂತನ ದೇವಾಲಯದ ಕಟ್ಟಡ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ ಸಭೆಯಲ್ಲಿ ಪಾಲ್ಗೊಂಡರು. ಈ ವೇಳೆ ಶಾಸ‌ಕ ದಿನಕರ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಂಡಿವಾಳ ಗ್ರಾಮದ ಜೊತೆ ಇರುವ ಹಳೆಯ ಒಡನಾಟಗಳನ್ನು ಸ್ಮರಿಸಿ ಊರಿನ ಅಭಿವೃದ್ಧಿಗೆ ಈ ಹಿಂದೆ ನೀಡಿದ ಅನುದಾನಗಳ ಜೊತೆ ಮುಂದೆಯೂ ಕೂಡ ದೇವಸ್ಥಾನ ನಿರ್ಮಾಣ ಹಾಗೂ ಊರಿನ ಪಕ್ಕದಲ್ಲಿ ರಸ್ತೆ ನಿರ್ಮಾಣಕ್ಕೆ ಸಂಪೂರ್ಣ ಬದ್ಧರಾಗಿದ್ದೇನೆಂದು ಹೇಳಿದ್ರು…

ಈ ವೇಳೆ ಸಭೆಯಲ್ಲಿ ಎಲ್. ಆರ್ ಹೆಬ್ಬಾರ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರೋಜಾ ಭಟ್ಟ, ಹಾಗೂ ಊರ ಹಿರಿಯರಾದ ಜಿ. ಟಿ. ಹೆಬ್ಬಾರ, ಹರಿಶ್ಚಂದ್ರ ಹೆಗಡೆ, ಶ್ರೀ ಶಿವರಾಮ ಹೆಗಡೆ, ವಿಷ್ಣುಮೂರ್ತಿ ಹೆಬ್ಬಾರ, ಬಿಜೆಪಿ ಮುಖಂಡ ಕೃಷ್ಣ ಗೌಡ ಕಡ್ನೀರು ಮೊದಲಾದವರು ಉಪಸ್ಥಿತರಿದ್ರು