ಅಪಾಯಮಟ್ಟ ಮೀರಿ ಹರಿಯುತ್ತಿರುವ ಕಾವೇರಿ.! ಮಳೆಯಾರ್ಭಟಕ್ಕೆ ಹಲವು ಕಡೆ ಸಂಪರ್ಕ ಕಡಿತ.!

ಕೊಡಗು: ಮಡಿಕೇರಿಯಲ್ಲಿ ಮಳೆಯಾರ್ಭಟ ಮುಂದುವರಿದಿದೆ. ಕಾವೇರಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ನಾಪೋಕ್ಲು ಗ್ರಾಮ‌ದ ವ್ಯಾಪ್ತಿಯ ಹಲವೆಡೆ ಪ್ರವಾಹ ಉಂಟಾಗಿದೆ. ಇನ್ನು ನಾಪೋಕ್ಲು-ಮೂರ್ನಾಡು ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ‌ ಕಡಿತಗೊಂಡಿದೆ. ಇನ್ನು ನಾಪೋಕ್ಲು-ಚೆರಿಯ ಪರಂಬು ಸಂಪರ್ಕವೂ ಕಡಿತ ಗೊಂಡಿದ್ದು ನಾಪೋಕ್ಲು ಬೆಟ್ಟಗೇರಿ ಮಧ್ಯೆ ರಸ್ತೆ ಕುಸಿತಗೊಂಡಿದೆ.