ಶಿಕ್ಷಕ ಗಂಗಾಧರ ಎಸ್. ಎಲ್‌ಗೆ ‘ಬಂಜಾರ ಸಾಹಿತ್ಯ ಸೇವಾ ರತ್ನ’ ಪ್ರಶಸ್ತಿ

ಯಲ್ಲಾಪುರ: ತಾಲೂಕಿನ ಅಲ್ಕೇರಿ ಗೌಳಿವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮತ್ತು ಸಾಹಿತಿ ಗಂಗಾಧರ ಎಸ್. ಎಲ್‌ಗೆ ಅಮೀನಗಡದ ವಿಶ್ವ ಬಂಜಾರ ಕಲಾ ಸಾಹಿತ್ಯಿಕ ಸಂಘದಿಂದ ನೀಡುವ ‘ಬಂಜಾರ ಸಾಹಿತ್ಯ ಸೇವಾ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗಂಗಾಧರ ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆ.7 ರಂದು ಅಮೀನಗಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.