ವಿಭಿನ್ನ ಹೋರಾಟಕ್ಕೆ ಮುಂದಾದ ಅತಿಥಿ ಉಪನ್ಯಾಸಕರು

ದಾವಣಗೆರೆ, ಡಿ.13: ವಿಭಿನ್ನ ಹೋರಾಟಕ್ಕೆ ಅತಿಥಿ ಉಪನ್ಯಾಸಕರು ಮುಂದಾಗಿದ್ದು, ಪ್ರತಿ ಸಿಗ್ನಲ್​ಗಳಲ್ಲಿ ಸುತ್ತಾಡಿ ‌ಕಡಲೆ ಮಾರಾಟ ಮಾಡಿದ್ದಾರೆ. ಸಿಗ್ನಲ್​ನಲ್ಲಿ‌ ನಿಂತ ವಾಹನ ಸವಾರರಿಗೆ ತಮ್ಮ ಪರಿಸ್ಥಿತಿ ಹೇಳಿ ಕಡಲೆ ಗಿಡ ಹಾಗೂ ಟೀ ಖರೀದಿಸುವಂತೆ ವಿನಂತಿಸಿದ್ದಾರೆ. ದಾವಣಗೆರೆ ವಿವಿಧ ತಾಲೂಕುಗಳ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ‌ ಈ ಹೋರಾಟಗಾರರು, ಇಂದು ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ತರಕಾರಿ ಹಾಗೂ ಟೀ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಮಾಡುತ್ತ, ಹತ್ತಾರು ವರ್ಷಗಳಿಂದ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಮಾಡಿದ್ದೇವೆ, ತಮ್ಮ ಸೇವೆಯನ್ನ ಪರಿಗಣಿಸಿ ಖಾಯಂ ಗೊಳಿಸುವಂತೆ ಆಗ್ರಹಿಸಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.