ಮಡಿಕೇರಿ: ವಾಹನ ಅಡ್ಡಗಟ್ಟಿ 50 ಲಕ್ಷ ರೂ. ದರೋಡೆ, ಕಾಮಗಾರಿಗಾಗಿ ಪತ್ನಿಯ ಚಿನ್ನ ಮಾರಿದ್ದೆ ಎಂದು ವ್ಯಕ್ತಿ ಅಳಲು

ಮಡಿಕೇರಿ, ಡಿ.10: ವಾಹನ ಅಡ್ಡಗಟ್ಟಿ 50 ಲಕ್ಷ ರೂ. ದರೋಡೆ ನಡೆಸಿದ ಆರೋಪ ಕೇಳಿ ಬಂದಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ದೇವರಪುರ ಬಳಿ ಕೇರಳದ ಮಲಪ್ಪುರಂ ಮೂಲದ ಗುತ್ತಿಗೆದಾರ ಶಂಜಾದ್​​ ಅವರು ಮೈಸೂರಿನಲ್ಲಿ ಚಿನ್ನಾಭರಣ ಮಾರಾಟ‌ ಮಾಡಿ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಕಾರು ನಿಲ್ಲಿಸಿ ದರೋಡೆ ಮಾಡಿದ್ದಾರೆ. ಹಣ ಕಳೆದುಕೊಂಡ ಶಂಜಾದ್ ಕಂಗಾಲಾಗಿದ್ದಾರೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ದೇವರಪುರ ಬಳಿ ವಾಹನ ಅಡ್ಡಗಟ್ಟಿ ಬರೋಬ್ಬರಿ 50 ಲಕ್ಷ ರೂಪಾಯಿ ದರೋಡೆ ಮಾಡಲಾಗಿದೆ. ಕೇರಳದ ಮಲಪ್ಪುರಂ ಮೂಲಕ ಗುತ್ತಿಗೆದಾರ ಶಂಜಾದ್ ಎಂಬುವರು ದರೋಡೆಯಾಗಿದೆ ಅಂತಾ ದೂರು ಕೊಟ್ಟಿದ್ದಾರೆ. ಕಾಮಗಾರಿಗಾಗಿ ಪತ್ನಿಯ 750 ಗ್ರಾಂ ಚಿನ್ನ ಮಾರಿದ್ದೇನೆ ಎಂದಿರೋ ಶಂಜಾದ್ ಸ್ನೇಹಿತ ಆಘ್ನು ಜೊತೆ ಕೇರಳಕ್ಕೆ ಹಿಂದಿರುಗುತ್ತಿದ್ದಾಗ ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ ಅಂತಾ ಶಂಜಾದ್ ದೂರು ದಾಖಲಿಸಿದ್ದಾರೆ. ದರೋಡೆ ಬಳಿಕ ಕಾರನ್ನೂ ಕಿತ್ತುಕೊಂಡು ಹೋಗಿದ್ದ ದುಷ್ಕರ್ಮಿಗಳು ವಿರಾಜಪೇಟೆಯ ಕೊಳತ್ತೋಡು ಬಳಿ ಬಿಟ್ಟುಹೋಗಿದ್ದಾರೆ. ಸದ್ಯ ಕಾರು ಪತ್ತೆಯಾಗಿದ್ದು, ಏನಾದ್ರೂ ಸುಳಿವು ಸಿಗಬಹುದಾ ಅಂತಾ ಗೋಣಿಕೊಪ್ಪ ಪೊಲೀಸರು ಹುಡುಕಾಟ ನಡೆಸಿದ್ದಾರೆ.