ಚುನಾವಣಾ ಫಲಿತಾಂಶ ಸಾಕಷ್ಟು ನಿರಾಸೆ ತಂದಿದೆ-ಕೆ.ಟಿ.ರಾಮರಾವ್

ಚುನಾವಣಾ ಫಲಿತಾಂಶ ಸಾಕಷ್ಟು ನಿರಾಸೆ ತಂದಿದೆ ಎಂದು ಸಿಎಂ ಕೆಸಿಆರ್ ಪುತ್ರ, ಸಚಿವ ಕೆ.ಟಿ.ರಾಮರಾವ್ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್​​ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದು, ನಮಗೆ 2 ಬಾರಿ ಅಧಿಕಾರ ನೀಡಿದ ತೆಲಂಗಾಣ ಜನತೆಗೆ ಧನ್ಯವಾದ. ಈ ಸೋಲಿನಿಂದ ಪಾಠ ಕಲಿತು ಮತ್ತೆ ಪಕ್ಷವನ್ನು ಸಂಘಟಿಸುತ್ತೇವೆ ಎಂದು ಹೇಳಿದ್ದಾರೆ.