ಜ.1ರಿಂದ ಜ.15ರವರೆಗೆ “ರಾಮ ಸಂದೇಶ ಮನೆಯಿಂದ ಮನೆಗೆ” ಅಭಿಯಾನ ಆರಂಭಿಸಲಿದೆ RSS

ಅಯೋಧ್ಯೆ ರಾಮಮಂದಿರ ಜನವರಿ 22ರಂದು ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ಮೋದಿ ಅವರು ಈ ಕಾರ್ಯವನ್ನು ಮಾಡಲಿದ್ದಾರೆ. ಇನ್ನು ರಾಮಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬ ಹಿಂದೂವಿನ ಪ್ರತ್ಯಕ್ಷ ಮತ್ತು ಪರೋಕ್ಷವಾದ ಶ್ರಮವಿದೆ ಎಂದು ರಾಮ ಮಂದಿರ ಟ್ರಸ್ಟ್ ಹೇಳಿದೆ. ಈ ಕಾರಣಕ್ಕೆ 10 ಕೋಟಿ ಜನರು ಈ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೀಗ ಇದರ ಜತೆಗೆ ರಾಮಮಂದಿರದ ವಿಚಾರಧಾರೆಗಳು ಹಾಗೂ ಲೋಕಾರ್ಪಣೆ ಸಮಯದಲ್ಲಿ ರಾಮ ಕಥೆಗಳು ಪ್ರತಿ ಮನೆ ಮನೆಗೆ ತಲುಪುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಅದರ ಅಂಗಸಂಸ್ಥೆಗಳು ಜನವರಿ 1 ರಿಂದ ಜನವರಿ 15 ರವರೆಗೆ “ರಾಮ ಸಂದೇಶ ಮನೆಯಿಂದ ಮನೆಗೆ” ಎಂಬ ಅಭಿಯಾನದ ಮೂಲಕ ತಲುಪಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಈ ಅಭಿಯಾನಕ್ಕಾಗಿ RSS ಕೆಲವೊಂದು ತಂಡಗಳನ್ನು ರಚಿಸಿ. ಪ್ರತಿ ಮನೆಗೆ, ರಾಮನ ಕಥೆ, ಅವರ ಜೀವನ, ಸಾಹಸ, ತ್ಯಾಗ ಹಾಗೂ ಜನವರಿ 22ರಂದು ರಾಮ ಮಂದರ ಲೋಕಾರ್ಪಣೆಯ ಆಮಂತ್ರಣ ನೀಡುವ ಮೂಲಕ ಬಹುದೊಡ್ಡ ಮಟ್ಟದಲ್ಲಿ ಜನರನ್ನು ಸಂಪರ್ಕಿಸುವ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಅಭಿಯಾನಕ್ಕೆ ಸಿದ್ಧತೆ ಬಗ್ಗೆ ನವೆಂಬರ್​​ ಮೊದಲ ವಾರದಲ್ಲೇ ಸಭೆ ನಡೆಸಲಾಗಿದೆ. ದೇಶದ ಪ್ರತಿ ರಾಜ್ಯದ ಪ್ರತಿ ಹಳ್ಳಿಗೂ ರಾಮ ಮಂದಿರ ಉದ್ಘಾಟನೆ ಆಮಂತ್ರಣ ಹಾಗೂ ರಾಮ ವಿಚಾರಧಾರೆಗಳು ತಲುಪಿಸುವ ಕೆಲಸವನ್ನು RSS ಮಾಡಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬೆಳೆ ಹೇಳಿದ್ದಾರೆ.

ಈ ಕಾರ್ಯಕ್ರಮದ ಮೂಲಕ ಸಾಂಸ್ಕೃತಿ, ರಾಜಕೀಯ, ಆರ್ಥಿಕವಾಗಿ ಸಾಧನೆ ಮಾಡಿದವರನ್ನು ತಲುಪುದರ ಜತೆಗೆ ಜನಸಾಮಾನ್ಯರನ್ನು ಕೂಡ ಈ ಕಾರ್ಯಕ್ಕೆ ಆಹ್ವಾನಿಸುವುದು ಪ್ರಮುಖ ಗುರಿಯಾಗಿದೆ. ಎಲ್ಲ ರಾಜ್ಯಗಳಲ್ಲೂ ರಾಮಮಂದಿರ ಕಾರ್ಯಕ್ರಮದ ಬಗ್ಗೆ ಪ್ರಸಾರ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಆರ್​​​ಎಸ್​​ಎಸ್​ ಹೇಳಿದೆ.

ಈ ಅಭಿಯಾನವು ಇನ್ನೊಂದು ಹಂತದಲ್ಲೂ ಕೆಲಸ ಮಾಡಲಿದೆ. ಹಿಂದೂಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡಲಿದೆ. ರಾಜಕೀಯ ಪಕ್ಷಗಳು ಜಾತಿ ಜನಗಣತಿ, ಇನ್ನು ಅನೇಕ ಉಪಕ್ರಮಗಳನ್ನು ಅನುಸರಿಸುತ್ತಿದೆ. ಈ ಯಾವುದಕ್ಕೂ ಅವಕಾಶ ನೀಡಬೇಡಿ ಎಂಬ ಎಚ್ಚರಿಕೆ ಮೂಲಕ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸ ಆಗಬೇಕಿದೆ. ಇದಕ್ಕೆ ಈ ಮನೆ ಸಂಪರ್ಕ ಸಹಾಯವಾಗಲಿದೆ ಎಂದು ಹೇಳಿದೆ.

ಇನ್ನು ಕಾಂಗ್ರೆಸ್​​​ ಈ ಬಗ್ಗೆ ಬೇರೆ ರೀತಿಯಲ್ಲಿ ಯೋಚನೆ ಮಾಡುತ್ತಿದೆ. ಜಾತಿ ಸಮೀಕ್ಷೆ, ಜಾತಿ ಮೀಸಲಾತಿ, ಇನ್ನು ಅನೇಕ ತಂತ್ರಗಳನ್ನು ಮಾಡಿ ಹಿಂದೂ ಸಮಾಜವನ್ನು ಹೊಡೆಯುತ್ತಿದೆ. ಇದನ್ನು ತಡೆಯುವ ಒಂದೇ ಶಕ್ತಿ ರಾಮ ಮನೆ ಮನೆಗೆ ಅಭಿಯಾನ, ಈ ಮೂಲಕ ಹಿಂದೂಗಳನ್ನು ನಾವು ಒಗ್ಗೂಡಿಸುತ್ತೇವೆ ಎಂದು ಹೇಳಿದ್ದಾರೆ.