ಮೈಸೂರು; ಪ್ರಸಿದ್ಧ ವಿನಾಯಕ ದೇವಸ್ಥಾನದಲ್ಲಿ ಖದೀಮರ ಕೈಚಳಕ, ಚಿನ್ನ ಬೆಲೆ ಬಾಳುವ ವಿಗ್ರಹಗಳ ಕಳ್ಳತನ

ಮೈಸೂರು, ನ.24: ರಾಜ್ಯದ ಅನೇಕ ಕಡೆಗಳಲ್ಲಿ ದೇವಸ್ಥಾನಗಳಿಗೆ ನುಗ್ಗಿ ಖದೀಮರು ಕಳ್ಳತನ ಮಾಡಿರುವ ಘಟನೆಗಳು ನಡೆದಿವೆ. ಮೈಸೂರು ಜಿಲ್ಲೆಯ ವಿನಾಯಕ ನಗರದ ವಿನಾಯಕ ದೇವಸ್ಥಾನದ  ಕಿಟಕಿ ಗಾಜು ಒಡೆದು ಚಿನ್ನದ ತಾಳಿ ಸೇರಿ ಬೆಲೆಬಾಳುವ ವಿಗ್ರಹಗಳನ್ನು ಕಳ್ಳತನ ಮಾಡಲಾಗಿದೆ. ವಿಷ್ಣು, ಗಣಪತಿ, ಮಹಾಲಕ್ಷ್ಮೀ, ಕೃಷ್ಣ, ಶಿವನವಿಗ್ರಹ ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿವಿ ಪುರಂ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.