ಕಾರವಾರದ ಚಿತ್ತಾಕುಲ ಪೋಲೀಸ್‌ ಠಾಣೆಗೆ ಭೇಟಿ ನೀಡಿದ ಮಾಜಿ ಶಾಸಕಿ ರೂಪಾಲಿ ನಾಯ್ಕ.

ಕಾರವಾರ : ಮಾನ್ಯ ಮಾಜಿ ಶಾಸಕಿ ರೂಪಾಲಿ ನಾಯ್ಕ ಇಂದು ಕಾರವಾರದ ಚಿತ್ತಾಕುಲ ಪೋಲೀಸ್‌ ಠಾಣೆಗೆ ಭೇಟಿ ನೀಡಿದರು. ಇತ್ತೀಚೆಗೆ ಸದಾಶಿವಗಡದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬಿಜೆಪಿ ಕಾರ್ಯಕರ್ತರಾದ ತುಕಾರಾಮ ಚೆಂಡೇಕರ ಎನ್ನುವವರು ಸಾವಿಗೀಡಾಗಿದ್ದರು. ಅವರ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ವಿಮಾ ಪರಿಹಾರಕ್ಕಾಗಿ ಬೇಕಾಗುವ ದಾಖಲೆಗಳು ಹಾಗು ಇತರ ವಿವರಗಳನ್ನು ಆದಷ್ಟು ಬೇಗ ನೀಡಿ, ಪರಿಹಾರಕ್ಕೆ ಸಹಕರಿಸಬೇಕೆಂದು ಅಲ್ಲಿನ ಪೋಲೀಸ್‌ ಉಪ ನಿರೀಕ್ಷಕರ ಜೊತೆ ಚರ್ಚಿಸಿದರು.