ಯಲ್ಲಾಪುರದಲ್ಲಿ ವಿದ್ಯುತ್‌ ಶಾರ್ಟ ಸರ್ಕ್ಯೂಟ್‌ ನಿಂದ ಚಹಾ ಅಂಗಡಿಗೆ ಬೆಂಕಿ. ರೂ.50 ಸಾವಿರಕ್ಕಿಂತ ಹೆಚ್ಚು ನಷ್ಟ.




ಯಲ್ಲಾಪುರ :- ತಾಲೂಕಿನ ವಜ್ರಳ್ಳಿಯಲ್ಲಿ ಆಕಸ್ಮಿಕ ವಿದ್ಯುತ್ ಶಾರ್ಟ ಸರ್ಕ್ಯೂಟ್‌ ನಿಂದ ಬೆಂಕಿ ತಗುಲಿದ ಪರಿಣಾಮ, ಅಲ್ಲೇ ಬಸ್‌ ನಿಲ್ದಾಣದ ಸಮೀಪವಿರುವ ಚಹಾ ಹಾಗೂ ತಿಂಡಿ ತಿನಿಸು ಮಾರಾಟ ಮಾಡುವ ಅಂಗಡಿ ಹೊತ್ತಿ ಉರಿದಿದೆ. ಅಂಗಡಿಯಲ್ಲಿದ್ದ ಬಹುತೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಮಂಜುನಾಥ ಎಂ ಮರಾಠಿ ಎಂಬುವವರಿಗೆ ಸೇರಿದ ಅಂಗಡಿ ಇದಾಗಿದ್ದು, ಅಂಗಡಿಯಲ್ಲಿದ್ದ ಮಿಕ್ಸರ್,ಥರ್ಮಸ್
ರೆಫ್ರೀಜರೇಟರ್ , ಟಿವಿ, ಗ್ಲಾಸಿನ ಕಪಾಟು,ಗೋಡೆ ಮತ್ತು ಸಿಮೆಂಟ್ ಸೀಟುಗಳು ಸಂಪೂರ್ಣ ಹಾನಿಯಾಗಿದೆ. ಮಾರಾಟಕ್ಕೆ ಇಟ್ಟಿದ್ದ ತಿಂಡಿ ತಿನಿಸು ಗಳು ಸುಟ್ಟು ಕರಕಲಾಗಿವೆ. ಈ ಆಕಸ್ಮಿಕ ಬೆಂಕಿ ಅವಘಡದಿಂದ ಅಂದಾಜು 50ಸಾವಿರ ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಅದೃಷ್ಟವಶಾತ್ ಪಕ್ಕದಲ್ಲಿದ್ದ ಸಿಲಿಂಡರ್ ಗೆ ಬೆಂಕಿ ತಗುಲದೇ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.