ದಾಂಡೇಲಿಯ ಮೃತ್ಯುಂಜಯ ಮಠದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಕಲ್ಯಾಣ ಮಂಟಪ‌ ನಿರ್ಮಾಣಕ್ಕೆ ಭೂಮಿ ಪೂಜೆ

ದಾಂಡೇಲಿ : ನಗರದ ಸಮೀಪದಲ್ಲಿರುವ ಶ್ರೀ.ಮೃತ್ಯುಂಜಯ‌ ಮಠದ ಆವರಣದಲ್ಲಿ‌ ನೂತನವಾಗಿ ನಿರ್ಮಾಣ‌ ಮಾಡಲು ಉದ್ದೇಶಿಸಲಾದ ಕಲ್ಯಾಣ ಮಂಟಪ‌ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆಯನ್ನು ನೆರವೇರಿಸಲಾಯ್ತು.

ನರಗುಂದದ ಪತ್ರಿವನ ಮಠದ ಪೂಜ್ಯ ಡಾ.ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳವರ ಕೃಪಾಶೀರ್ವಾದದೊಂದಿಗೆ ಹಾಗೂ ವೀರಶೈವಾ ಸಮಾಜ ಬಾಂಧವರ ಸಹಕಾರದಲ್ಲಿ ನೂತನ‌ ಕಲ್ಯಾಣ ಮಂಟಪ ನಿರ್ಮಾಣ‌ ಕಾರ್ಯ ನಡೆಯಲಿದೆ.

ಈ ಸಂದರ್ಭದಲ್ಲಿ ವೀರಶೈವಾ ಸಮಾಜದ‌ ಪದಾಧಿಕಾರಿಗಳು, ಸಮಾಜ ಬಾಂಧವರು, ಶ್ರೀ.ಮೃತ್ತುಂಜಯ ಮಠದ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾಭಿಮಾ‌ನಿಗಳು ಉಪಸ್ಥಿತರಿದ್ದರು.