ಲೋಕ ಸಭಾ ಚುನಾವಣೆಯಲ್ಲಿ ಅರಣ್ಯ ಅತಿಕ್ರಮಣ ಹೋರಾಟಗಾರ ರವೀಂದ್ರ ನಾಯ್ಕ್ ಗೆ ಕಾಂಗ್ರೆಸ್ ನಿಂದ ಟಿಕೇಟ್ ನೀಡುವಂತೆ ಸಮಾನ ಮನಸ್ಕರ ವತಿಯಿಂದ ಒತ್ತಾಯ.

ಸಿದ್ದಾಪುರ : ಮುಖಂಡ ವೀರಭದ್ರ ನಾಯ್ಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಕಳೆದ 35-40 ವರ್ಷಗಳಿಂದ ಅರಣ್ಯ ಅತಿಕ್ರಮಣ ವಿಷಯಕ್ಕೆ ಸಂಬಂಧಿಸಿದಂತೆ ರವೀಂದ್ರ ನಾಯಕ್ ಅವರು ಹೋರಾಟವನ್ನು ನಡೆಸುತ್ತಾ ಬಂದಿದ್ದು ಮುಂಬರುವ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದರು. ಕೇವಲ ರವೀಂದ್ರ ನಾಯ್ಕ್ ರವರಿಗೆ ಮಾತ್ರ ನಿಮ್ಮ ಸಹಕಾರವು ಅಥವಾ ಯಾವುದೇ ಅಭ್ಯರ್ಥಿಗೆ ಟಿಕೇಟ್ ನೀಡಿದರು ನೀವು ಸಹಕಾರ ನೀಡುತ್ತಿರೋ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೀರಭದ್ರ ನಾಯ್ಕ್ ಟಿಕೇಟ್ ನೀಡುವ ನಿರ್ಧಾರ ಪಕ್ಷಕ್ಕೆ ಬಿಟ್ಟಿದ್ದು ಯಾರಿಗೆ ಟಿಕೆಟ್ ನೀಡಿದರು ನಾವು ಸಹಕಾರವನ್ನು ನೀಡುತ್ತೇವೆ ಎಂದರು ಆದರೆ ರವೀಂದ್ರ ನಾಯ್ಕ್ ಗೆ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದೇವೆ ವಕೀಲ ಜಿ. ಟಿ. ನಾಯ್ಕ್ ಆಕಾಂಕ್ಷಿ ಇದ್ದಾರೆ ಪಕ್ಷ ಅವರಿಗೆ ನೀಡಿದರು ಸಹಕಾರ ಇದೆ ಎಂದರು. ಒಂದು ವೇಳೆ ಬಿಜೆಪಿಯಿಂದ ರವೀಂದ್ರ ನಾಯ್ಕ್ ಗೆ ಟಿಕೇಟ್ ನೀಡಿದರೆ ಸಹಕಾರ ಇದೆಯೋ ಎನ್ನುವ ಪ್ರಶ್ನೆಗೆ ವಿನಾಯಕ ನಾಯ್ಕ್ ಉತ್ತರಿಸಿ ಬಿಜೆಪಿಯಿಂದ ಟಿಕೆಟ್ ನೀಡಿದರೂ ನಮ್ಮ ಸಹಕಾರವಿದೆ ಎಂದರು . ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಮಹಾಬಲೇಶ್ವರ ನಾಯ್ಕ್ , ರಾಘವೇಂದ್ರ, ಪಾಂಡುರಂಗ,ದಿನೇಶ್, ಸುರೇಶ್, ರಾಮಚಂದ್ರ,ಕೃಷ್ಣಪ್ಪ, ಗೋವಿಂದ, ವಿನಾಯಕ ಮುಂತಾದವರು ಉಪಸ್ಥಿತರಿದ್ದರು.