ರಾಮಾಪುರದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಗಮನ ಸೆಳೆದ ಛದ್ಮವೇಷ

ಹಳಿಯಾಳ : ತಾಲೂಕಿನ ರಾಮಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೆಸರೊಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಡೊಮಗೇರಾ ಸ.ಹಿ.ಪ್ರಾ.ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ಸೋಹಂ ಮಂಜುನಾಥ ಕಾಮ್ರೇಕರ್ ಈತನು ಛದ್ಮವೇಷ ಸ್ಪರ್ಧೆಯಲ್ಲಿ ಹಳ್ಳಿಯ ರೈತನ ವೇಷಭೂಷಣದೊಂದಿಗೆ ಚಕ್ಕಡಿ ಗಾಡಿಯಲ್ಲಿ ವೇದಿಕೆಗೆ ಆಗಮಿಸಿ, ಮನೋಜ್ಞ ಅಭಿನಯವನ್ನು ನೀಡಿ ಎಲ್ಲರ ಗಮನ ಸೆಳೆದಿದ್ದಾನೆ.

ಗ್ರಾಮೀಣ ಭಾಗದ ಬಾಲಕನ ಈ ಛದ್ಮವೇಷಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತ ನಾಯ್ಕ ಅವರು ಮಾರ್ಗದರ್ಶನ ಮಾಡಿದ್ದರು.