ಹೊನ್ನಾವರ:ವಿದ್ಯಾರ್ಥಿಗಳ ಕಲಿಕೆ ಬರಿ ಪುಸ್ತಕಕ್ಕೆ ಸೀಮಿತವಾಗಿರಬಾರದು, ಜೀವನದ ಕಲೆಗೆ ಅವಶ್ಯವಿರುವುದೆಲ್ಲವನ್ನು ಕಲಿಯಬೇಕು-ಶ್ರೀ ಮಾರುತಿ ಗುರೂಜಿ

ಹೊನ್ನಾವರ:ವಿದ್ಯಾರ್ಥಿಗಳ ಕಲಿಕೆ ಬರಿ ಪುಸ್ತಕಕ್ಕೆ ಸೀಮಿತವಾಗಿರಬಾರದು, ಜೀವನದ ಕಲೆಗೆ ಅವಶ್ಯವಿರುವುದೆಲ್ಲವನ್ನು ಕಲಿಯಬೇಕು ಎಂದು ಶ್ರೀ ಮಾರುತಿ ಗುರೂಜಿಯವರು ನುಡಿದರು.

ಅವರು ಗೇರುಸೊಪ್ಪಾದ ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ಮತ್ತು ಪಿ. ಯು. ಕಾಲೇಜಿನ ಕರಾಟೆ ಹಾಗೂ ಚೆಸ್ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.
ಕರಾಟೆ ಯಾವುದೇ ಆಯುಧಗಳಿಲ್ಲದೆ ಆತ್ಮ ರಕ್ಷಣೆಮಾಡಿಕೊಳ್ಳುವ ಕಲೆಯಾಗಿದ್ದು ಎಲ್ಲಾ ವಿದ್ಯಾರ್ಥಿಗಳಿಗೂ ಇದರ ಅವಶ್ಯಕತೆ ಇದ್ದು ಹೆಣ್ಣು ಮಕ್ಕಳಿಗೆ ತುಂಬಾ ಅನುಕೂಲಕರ ಅವಶ್ಯ ಕಲೆಯಾಗಿದೆ ಎಂದರು. ಹಾಗೇ ಚೆಸ್ ಸಹ ವಿದ್ಯಾರ್ಥಿಗಳಿಗೆ ಎಕಾಗ್ರತೆಯೊಂದಿಗೆ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಮ್ಮ ಮಾತುಗಳಲ್ಲಿ ವಿವರಿಸಿದರು.
ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್ ಮತ್ತು ಪಿ. ಯು. ಕಾಲೇಜ್ ವಿದ್ಯಾರ್ಥಿಗಳಿಗಾಗಿ ತಬಲ, ಸಂಗೀತ, ಭರತನಾಟ್ಯ, ಯಕ್ಷಗಾನ ಕಲೆಗಳ ತರಬೇತಿಯನ್ನು ನೀಡುತ್ತಿದ್ದು ವಿದ್ಯಾರ್ಥಿಗಳ ಆಸಕ್ತಿಯನ್ನು ಮನಗಂಡು ಕರಾಟೆ ಹಾಗೂ ಚೆಸ್ ತರಗತಿಗಳನ್ನು ಆರಂಭಿಸಲು ನಿರ್ಣಯಿಸಿ ಕರಾಟೆ ಹಾಗೂ ಚೆಸ್ ತರಗತಿಗಳ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಕಾರ್ಯದರ್ಶಿಗಳಾದ ಅರ್ಪಿತಾ ಮಾರುತಿ ಗುರೂಜಿ, ರಾಷ್ಟೀಯ ತರಬೇತುದಾರರಾದ ಪ್ರಭಾಕರ್ , ಸಂಸ್ಥೆಯ ಆಡಳಿತಾಧಿಕಾರಿಗಳಾದ ಮಂಜುನಾಥ ಎಮ್.ಎನ್., ಪ್ರಾಂಶುಪಾಲರಾದ ಎಸ್. ಜಾನ್ ಬೊಸ್ಕೊ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಾಷ್ಟೀಯ ತರಬೇತುದಾರರಾದ ಪ್ರಭಾಕರ್ ಇವರು ತಮ್ಮ ತಂಡದೊಂದಿಗೆ ತರಬೇತಿ ನೀಡಲು ಆಗಮಿಸಿದ್ದು ಕರಾಟೆಯ ಇತಿಹಾಸವನ್ನು ಸಂಕ್ಷಿಪ್ತವಾಗಿ ವಿವರಿಸುವುದರ ಜೊತೆಗೆ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಸಭೆಯ ಕೊನೆಯಲ್ಲಿ ತರಬೇತಿ ತಂಡದವರು ವೇದಿಕೆಯ ಮೇಲೆ ಗೌರವವನ್ನು ಸ್ವೀಕರಿಸಿ ತರಗತಿಯನ್ನು ಆರಂಭಿಸಿದರು.