ದಾಂಡೇಲಿ :ಕೋಗಿಲಬನದ ಶ್ರೀ.ಮೃತ್ಯುಂಜಯ ಮಠದಲ್ಲಿ ಶ್ರಾವಣ ಸಂಭ್ರಮ

ದಾಂಡೇಲಿ : ನಗರದ ಸಮೀಪದ ಕೋಗಿಲಬನದಲ್ಲಿರುವ ಶ್ರೀ.ಮೃತ್ಯುಂಜಯ ಮಠದಲ್ಲಿ ಶ್ರಾವಣ ಸಂಭ್ರಮ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ. ಶ್ರಾವಣ ಮಾಸ ಆರಂಭವಾದಗಿನಿಂದ ನಿರಂತರ ಶಿವ ಶರಣರ ಜ್ಞಾನಮೃತ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನಗರದ ಶ್ರೀ.ವೀರಶೈವ ಸೇವಾ ಸಂಘ ಕಮೀಟಿಯ ಆಶ್ರಯದಲ್ಲಿ ಹಮ್ಮಿಕೊಂಡಿರುವ ಶಿವ ಶರಣರ ಜ್ಞಾನಮೃತ ದಾಸೋಹ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ನವಲಗುಂದ ತಾಲ್ಲೂಕಿನ ವೇದಮೂರ್ತಿ ಶ್ರೀ.ವೀರಯ್ಯಾ ಶಾಸ್ತ್ರಿಗಳವರಿಂದ ಪ್ರತಿದಿನ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ. ಇಂದು ಭಾನುವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆ.ಬಿ.ನಂಜುಂಡಪ್ಪ ಅವರು ಇಂದು ಪೂಜಾಕೃತೃಗಳಾಗಿ ಭಾಗವಹಿಸಿದ್ದರು. ಪ್ರವಚನ ಕಾರ್ಯಕ್ರಮ ಮುಗಿದ ಬಳಿಕ ಆಗಮಿಸಿದ್ದ ಭಕ್ತಾಧಿಗಳಿಗೆ ರಾತ್ರಿ ಮಹಾಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿತ್ತು.