ಭಟ್ಕಳ: ತಾಲೂಕಾ ಗಾಣಿಗ ಸೇವಾ ಸಂಘದವತಿಯಿಂದ ಕೃಷ್ಣ ಜನ್ಮಾಷ್ಟಮಿ ನಿಮಿತ್ತಮುದ್ದು- ರಾಧೆ , ಮುದ್ದು – ಕೃಷ್ಣ ಸ್ಪರ್ಧೆ

ಭಟ್ಕಳ: ಪ್ರತಿ ವರ್ಷದಂತೆ ಈ ವರ್ಷವು ಕೂಡ ಸೆ. 3 ಕೃಷ್ಣ ಜನ್ಮಾಷ್ಟಮಿ ಎಂದು  ಮಧ್ಯಾಹ್ನ 2 ಗಂಟೆಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ  ಮುದ್ದು ರಾಧೆ , ಮುದ್ದು ಕೃಷ್ಣ ಸ್ಪರ್ಧೆಯನ್ನು ಭಟ್ಕಳ ತಾಲೂಕಾ ಗಾಣಿಗ ಸೇವಾ ಸಂಘ , ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ,  ಶ್ರೀ ಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ  ಹಮ್ಮಿಕೊಳ್ಳಲಾಗಿದೆ ಭಟ್ಕಳ ತಾಲೂಕಾ ಗಾಣಿಗ ಸೇವಾ ಸಂಘದ ಅಧ್ಯಕ್ಷರಾದ ಸುಭಾಷ್ ಎಮ್ ಶೆಟ್ಟಿ ಹೇಳಿದರು.

ಈ ಸ್ಪರ್ಧೆಯಲ್ಲಿ  6 ವರ್ಷದ ಮಕ್ಕಳು ಭಾಗವಹಿಸ ಬಹುದಾಗಿದ್ದು. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಮಕ್ಕಳಿಗೆ ನಗದು ಪುರಸ್ಕಾರ  , ಫಲಕ , ಹಾಗೂ ಪ್ರಶಸ್ತಿ ಪತ್ರ ಮತ್ತು ಎರಡೂ ವಿಭಾಗಗಳಲ್ಲಿ ಸಮಾಧಾನಕರ ನಗದು ಪುರಸ್ಕಾರವನ್ನು ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಮುದ್ದು ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕು ಎಂದರು

ಕಾರ್ಯಕ್ರಮದ  ಸಂಯೋಜಕರಾದ ಪ್ರಕಾಶ ಶಿರಾಲಿ ಮಾತನಾಡಿ ಭಾಗವಹಿಸುವ ಎಲ್ಲಾ ಮುದ್ದು ಮಕ್ಕಳಿಗೆ ಪ್ರಶಸ್ತಿ ಪತ್ರ, ಹಾಗೂ ಗಿಫ್ಟ್ ಬಾಕ್ಸ ನೀಡಲಾಗುವುದು.ಸೆಪ್ಟೆಂಬರ್ 1 ಹೆಸರು ನೋಂದಾಯಿಸಲು ಕೊನೆಯ  ದಿನಾಂಕ ವಾಗಿದೆ ಎಂದ ಅವರು ದಿ. ನ್ಯೂ ಇಂಗ್ಲೀಷ್ ಪಿ ಯು ವಿದ್ಯಾರ್ಥಿಗಳಿಂದ ಕೃಷ್ಣ ರೂಪಕ ನೃತ್ಯೋತ್ಸವ, ಮಕ್ಕಳಿಂದ ಭಗವದ್ಗೀತೆ ಪಠಣ , ಭಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು

ಈ ಸಂದರ್ಭದಲ್ಲಿ  ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ನಾರಾಯಣ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ಗಜಾನನ ಶೆಟ್ಟಿ ಮುರ್ಡೆಶ್ವರ, ಸದಸ್ಯರಾದ  ವಿಶಾಲಾಕ್ಷಿ ಶೆಟ್ಟಿ, ಪೂರ್ಣಿಮಾ ಶೆಟ್ಟಿ,ಉಪಸ್ಥಿತಿತರಿದ್ದರು.