ಟಿ.ಎಸ್.ಎಸ್ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ವೀರೇಂದ್ರ ಪುಟ್ಟಪ್ಪ ಗೌಡರ್ ಅವರಿಗೆ ಸನ್ಮಾನ

ಹಳಿಯಾಳ : ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾಗಿರುವ ತೋಟಗಾರ್ಸ್ ಕೋ ಆಪರೇಟಿವ್ ಸೊಸೈಟಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಿರ್ದೇಶಕರಾಗಿ ಆಯ್ಕೆಯಾದ ವೀರೇಂದ್ರ ಪುಟ್ಟಪ್ಪ ಗೌಡರ್ ಅವರನ್ನು ಸಿದ್ದಾಪುರದ ಅವರ ಸ್ವಗೃಹದಲ್ಲಿ ವೀರಶೈವ ಮಹಾಸಭಾ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ಹಳಿಯಾಳ ಪುರಸಭೆಯ ಸದಸ್ಯರಾದ ಉದಯ ಹೂಲಿಯವರು ವೀರಶೈವಾ ಮಹಾಸಭಾದ ಪರವಾಗಿ ಸನ್ಮಾನಿಸಿ‌ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉದಯ ಹೂಲಿಯವರು ಜಿಲ್ಲೆಯ ಪ್ರತಿಷ್ಠಿತ ಟಿಎಸ್ಎಸ್ ಸಹಕಾರಿ ಸಂಘದಲ್ಲಿ ಮೊಟ್ಟ ಮೊದಲ ಬಾರಿಗೆ ವೀರಶೈವ ಸಮಾಜದಿಂದ ನಿರ್ದೇಶಕರಾಗಿ ವೀರೇಂದ್ರ ಪುಟ್ಟಪ್ಪ ಗೌಡರ್ ಆಯ್ಕೆಯಾಗಿರುವುದು ಇಡೀ ನಮ್ಮ ಸಮಾಜಕ್ಕೆ ಅತ್ಯಂತ ಗೌರವ ಮತ್ತು ಹೆಮ್ಮೆಯನ್ನು ತಂದಿದೆ. ಸಮಾಜ ಬಾಂಧವರು ಇಂತಹ ಸಹಕಾರಿ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇವೆಯನ್ನು ಸಲ್ಲಿಸಲು ಮುಂದೆ ಬರಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬಸವರಾಜ ಚಕ್ರಸಾಲಿ, ಚಂದ್ರಶೇಖರ ಹಿರೇಮಠ, ಪರಮೇಶ್ವರಿ ಕಾನಳಿಮಠ, ಶಾರದಾ ಉದಯ ಹೂಲಿ‌ ಮೊದಲಾದವರು ಉಪಸ್ಥಿತರಿದ್ದರು.