ಶ್ರೀಮದ್ ವಿದ್ಯಾದೀಶ ಶ್ರೀಪಾದ ವಡೇರ ಸ್ವಾಮೀಜಿ ಬೇಟಿ ಮಾಡಿದ ಸಚಿವ ಮಂಕಾಳ ವೈದ್ಯ

ಭಟ್ಕಳ: ಮಹಾರಾಷ್ಟ್ರದ ಮುಂಬಯಿನ ಪನ್ವೇಲ್ ನಲ್ಲಿ ಚಾತುರ್ಮಾಸ ವೃತದಲ್ಲಿದ್ದ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾದೀಶ ಶ್ರೀಪಾದ ವಡೇರ ಸ್ವಾಮೀಜಿಯವರನ್ನು ಮೀನುಗಾರಿಕೆ ಹಾಗೂ ಬಂದರು ಒಳನಾಡು ಸಚಿವ ಮಂಕಾಳ ವೈದ್ಯ ಬೇಟಿಯಾಗಿ ಆಶೀರ್ವಾದ ಪಡೆದರು.
ಅವರು ಪನ್ವೇಲ್ ನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಶ್ರೀಗಳನ್ನು ಬೇಟಿಯಾದರು. ಬಳಿಕ ಗೋಕರ್ಣ ಪರ್ತಗಾಳಿ ಮಠದ ವತಿಯಿಂದ ನಡೆಯುತ್ತಿರುವ ವೃದ್ದಾಶ್ರಮ, ಇಂಗ್ಲೀಷ್ ಮಿಡಿಯಮ್ ಶಾಲೆಗಳಿಗೆ ಬೇಟಿ ನೀಡಿದರು. ಬಳಿಕ ಮಾತನಾಡಿದ ಅವರು ಶ್ರೀ ಗೋಕರ್ಣ ಪರ್ತಗಾಳಿ ಮಠವೂ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ‌ಕ್ಷೇತ್ರದಲ್ಲೂ ತನ್ನದೆ ಆದ ಕೊಡುಗೆ ನೀಡುತ್ತಿದೆ. ಶ್ರೀ ಗೊಕರ್ಣ ಪರ್ತಗಾಳಿ ಮಠವೂ ಹಲವು ಶೈಕ್ಷಣಿಕ ಸಂಸ್ಥೆ, ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೇರಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಾಯ ನೀಡುತ್ತಿರುವದು ಶ್ಲಾಘನೀಯ ಎಂದು ಹೇಳಿದರು.
ಕಾರವಾರ ಶಾಸಕ ಸತೀಶ ಸೈಲ್ ಕೂಡ ಸಚಿವ ಮಂಕಾಳ ವೈದ್ಯರೊಂದಿಗೆ ತೆರಳಿ ಶ್ರೀಗಳಿಂದ ಆಶೀರ್ವಾದ ಪಡೆದರು. ಭಟ್ಕಳ ಜಿಎಸ್ ಬಿ ಸಮಾಜದ ಅಧ್ತಕ್ಷ ಸುಬ್ರಾಯ ಕಾಮತ, ಉದಯ ಪೈ, ಅಚ್ಯುತ ಕಾಮತ, ರಾಮು ಕಾಮತ, ಪ್ರದೀಪ ಪೈ, ಸೂರಿ ಕಾಮತ ಸೇರಿ ಇತರರು ಇದ್ದರು.