ಯಲ್ಲಾಪುರ: ಭಟ್ಕಳದಲ್ಲಿ ವಕೀಲರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ತಹಸೀಲ್ದಾರರಿಗೆ ಮನವಿ

ಯಲ್ಲಾಪುರ: ಭಟ್ಕಳದಲ್ಲಿ ವಕೀಲರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಪಟ್ಟಣದಲ್ಲಿ ತಾಲೂಕು ವಕೀಲರ ಸಂಘದಿಂದ ಬುಧವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಭಟ್ಕಳದಲ್ಲಿ ವಕೀಲರ ಮೇಲೆ ಹಲ್ಲೆ ನಡೆಸಿದ ಕಕ್ಷಿದಾರನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ವಕೀಲರ ಸುರಕ್ಷತೆಗಾಗಿ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು ಮನವಿಯ ಮೂಲಕ ಸರ್ಕಾರಕ್ಕೆ ವಕೀಲರು ಒತ್ತಾಯಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷೆ ಸರಸ್ವತಿ ಭಟ್ಟ, ಕಾರ್ಯದರ್ಶಿ ಜಿ.ಜಿ.ಪಾಟಣಕರ್, ಖಜಾಂಚಿ ಎಂ.ಕೆ.ಹೆಗಡೆ, ವಕೀಲರಾದ ಜಿ.ಎಸ್.ಭಟ್ಟ ಹಳವಳ್ಳಿ, ಜಿ.ವಿ.ಭಾಗ್ವತ, ವಿ.ಟಿ.ಭಟ್ಟ, ಮಹೇಶ ನಾಯ್ಕ ಇತರರಿದ್ದರು.