ಮುರುಡೇಶ್ವರದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಕಾರಿನಿಂದ ಗುದ್ದಿ, ಹಲ್ಲೆ

ಭಟ್ಕಳ: ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊರ್ವನಿಗೆ ಮೂವರು ಕಾರಿನಿಂದು ಗುದ್ದಿ, ಬಳಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ತಾಲೂಕಿನ ಮುರ್ಡೇಶ್ವರದಲ್ಲಿ ನಡೆದಿದೆ.

ಮುರ್ಡೇಶ್ವರ ಕನ್ನಡ ಶಾಲೆಯ ಬಳಿಯ ನಿವಾಸಿ ಹೃತಿಕ್ ಮಂಜುನಾಥ ನಾಯ್ಕ ಹಲ್ಲೆಗೊಳಗಾದ ವ್ಯಕ್ತಿ. ಮುರ್ಡೇಶ್ವರ ನಿವಾಸಿಗಳಾದ ದರ್ಶನ ನಾಯ್ಕ, ಗಣೇಶ ಜಯಂತ ನಾಯ್ಕ, ಗಣೇಶ ಶೇರುಗಾರ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ. ಹೃತಿಕ್ ನಾಯ್ಕ ಇವರು ಮುರ್ಡೇಶ್ವರ ಗೇಟ್ ಬಳಿಯಿಂದ ದೇವಸ್ಥಾನದ ರಸ್ತೆಗೆ ಬರುವಾಗ ದರ್ಶನ ನಾಯ್ಕ ಎನ್ನುವವರು ಗಣೇಶ ನಾಯ್ಕ, ಗಣೇಶ ಶೇರುಗಾರ ಜೊತೆ ಸೇರಿ ಕಾರಿನಿಂದ ಗುದ್ದಿ,ಕಟ್ಟಿಗೆ ರೀಪ್,ನಿಂದ ತಲೆಗೆ,ಕಿವಿಗೆ,ಮತ್ತು ಕಾಲಿಗೆ ಹೊಡೆದು ಹಲ್ಲೆ ನಡೆಸಿ ಬಳಿಕ ಜೀವ ಬೆದರಿಕೆ ಹಾಕಿದ್ದಾರೆ.
ನಂತರ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದ ಹೃತಿಕ್ ಅವರನ್ನು ತಕ್ಷಣ ಆರ್.ಎನ್.ಎಸ್.ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಬಗ್ಗೆ ಗಾಯಾಳು ತಾಯಿ ಸುಮಿತ್ರಾ ನಾಯ್ಕಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.