ಯಲ್ಲಾಪುರ ರಾ.ಹೆದ್ದಾರಿ 63ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಎರಡು ಪ್ರತ್ಯೇಕ ಲಾರಿಗಳು ಪಲ್ಟಿ



ಯಲ್ಲಾಪುರ: ಇಡಗುಂದಿ ಸಮೀಪದ ಘರವಾಸ ಕ್ರಾಸ್ ಬಳಿಯಲ್ಲಿ ಗ್ಯಾಸ್ ಬುಲೆಟ್ ಟ್ಯಾಂಕರ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಯಲ್ಲಾಪುರದಿಂದ ಅಂಕೋಲಾ ಕಡೆಗೆ ಹೊರಟಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕಿಳಿದು ಗಟಾರ ಆಚೆ ಇರುವ ಮರಕ್ಕೆ ಗುದ್ದಿದೆ. ಟ್ಯಾಂಕರ್ ಮುಂಭಾಗ ಜಖಂಗೊಂಡಿದೆ. ಚಾಲಕ, ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ.
ಬಳಗಾರ ಕ್ರಾಸ್ ಕಂಟೇನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿದೆ. ಯಲ್ಲಾಪುರದಿಂದ ಅಂಕೋಲಾ ಕಡೆಗೆ ಹೊರಟಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆ ಗಟಾರಕ್ಕಿಳಿದು ಮುಂಭಾಗ ಜಖಂಗೊಂಡಿದೆ. ಚಾಲಕ, ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಗಾರ ಕ್ರಾಸ್ ಬಳಿ ಶುಕ್ರವಾರವೂ ಒಂದು ಕಂಟೇನರ್ ಲಾರಿ ಪಲ್ಟಿಯಾಗಿತ್ತು.