ಹಳಿಯಾಳ ಪಟ್ಟಣದ ಶ್ರೀ.ಗಣಪತಿ ದೇವಸ್ಥಾನ ಮತ್ತು ಶ್ರೀ.ಬಸವೇಶ್ವರ ದೇವಸ್ಥಾನಕ್ಕೆ ಶ್ರೀಶೈಲ ಜಗದ್ಗುರು ಮಹಾಸ್ವಾಮೀಜಿ ಭೇಟಿ.

ಹಳಿಯಾಳ : ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಯವರು ಹಳಿಯಾಳ ಪಟ್ಟಣಕ್ಕೆ ಆಗಮಿಸಿ, ಪಟ್ಟಣದ ಶ್ರೀ.ಗಣಪತಿ ದೇವಸ್ಥಾನಕ್ಕೆ ಹಾಗೂ ಪ್ಯಾಟೆ ಶ್ರೀ.ಬಸವೇಶ್ವರ ಮಂದಿರಕ್ಕೆ ಭೇಟಿ ನೀಡಿ ಶ್ರೀ.ದೇವರ ದರ್ಶನವನ್ನು ಪಡೆದರು.

ಈ ಸಂದರ್ಭದಲ್ಲಿ ಎರಡು ದೇವಸ್ಥಾನಗಳ ಆಡಳಿತ ಸಮಿತಿಯ ಪದಾಧಿಕಾರಿಗಳು ಭಕ್ತಿಪೂರ್ವಕವಾಗಿ ಸ್ವಾಮೀಜಿಯವರನ್ನು ಶ್ರೀ.ಸ್ವಾಮಿ ಸನ್ನಿಧಿಗೆ ಬರಮಾಡಿಕೊಂಡರು. ಸ್ವಾಮೀಜಿಯವರು ಆಗಮಿಸುತ್ತಿರುವ ಸುದ್ದಿ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಎರಡು ದೇವಸ್ಥಾನದಲ್ಲಿ ಜಮಾವಣೆಗೊಂಡಿದ್ದರು.