ದಾಂಡೇಲಿಗೆ ಭೇಟಿ ನೀಡಿದ ಶ್ರೀಶೈಲ ಜಗದ್ಗುರು ಮಹಾಸ್ವಾಮೀಜಿ

ದಾಂಡೇಲಿ : ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಯವರು ದಾಂಡೇಲಿ ನಗರಕ್ಕೆ ಆಗಮಿಸಿ, ನಗರದ ಪಟೇಲ್ ವೃತ್ತದ ಸಮೀಪವಿರುವ ಶ್ರೀ ಜಗಜ್ಯೋತಿ ಬಸವೇಶ್ವರ ಮೂರ್ತಿಯ ದರ್ಶನವನ್ನು ಪಡೆದು, ಭಕ್ತಾದಿಗಳಿಗೆ ಆಶೀರ್ವಚನವನ್ನು ನೀಡಿದರು.

ಈ ಸಂದರ್ಭದಲ್ಲಿ ಶ್ರೀ.ಬಸವೇಶ್ವರ ಮೂರ್ತಿ ಪ್ರತಿಷ್ಟಾಪನಾ ಸಮಿತಿಯ ಅಧ್ಯಕ್ಷರಾದ ಯು.ಎಸ್.ಪಾಟೀಲ್, ಪ್ರಧಾನ ಕಾರ್ಯದರ್ಶಿ ಬಸವರಾಜ ಕಲಶೆಟ್ಟಿ, ಸಮಿತಿಯ ಪದಾಧಿಕಾರಿಗಳು, ವೀರಶೈವಾ ಸಮಾಜದ ಪದಾಧಿಕಾರಿಗಳು, ಶ್ರೀ.ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ, ಶ್ರೀ.ಮೃತ್ಯುಂಜಯ ಮಠದ ಪದಾಧಿಕಾರಿಗಳು ಮತ್ತು ಸದಸ್ಯರಯ, ನಗರದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು