ಸಿವಿಲ್ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾದಿ ದಿ: ಅಜಿತ್ ನಾಯಕ ಅವರ 5ನೇ ಪುಣ್ಯಸ್ಮರಣೆ

ದಾಂಡೇಲಿ : ನಗರದ ಹಿರಿಯ ನ್ಯಾಯವಾದಿ, ವಕೀಲರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ದಿ: ಅಜಿತ್ ನಾಯಕ ಅವರ 5ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ನಗರದ ಸಿವಿಲ್ ನ್ಯಾಯಾಲಯದ ವಕೀಲರ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.

ದಿ: ಅಜಿತ್ ನಾಯಕ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯ್ತು. ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ರೋಹಿಣಿ.ಡಿ.ಬಸಾಪುರ್, ವಕೀಲರ ಸಂಘದ ಅಧ್ಯಕ್ಷರಾದ ಎಚ್.ಎಸ್.ಕುಲಕರ್ಣಿ, ಕಾರ್ಯದರ್ಶಿ ಐ.ಸಿ.ನಾಯ್ಕ, ಉಪಾಧ್ಯಕ್ಷೆ ರೇಷ್ಮಾ ಬಾವಾಜಿ, ಹಿರಿಯ ವಕೀಲರುಗಳಾದ ವಿ.ಆರ್.ಹೆಗಡೆ, ಎಂ.ಸಿ.ಹೆಗಡೆ, ಎಸ್.ಎಂ.ದಬಗಾರ್, ಎಸ್.ಸೋಮಕುಮಾರ್ ಹಾಗೂ ವಕೀಲರುಗಳು ಮತ್ತು ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.