ದಾಂಡೇಲಿ: ನಗರ ಸಭೆಯ ವ್ಯಾಪ್ತಿಯಲ್ಲಿ ಕರ್ನಾಟಕ ಸರಕಾರದ ಆದೇಶದಂತೆ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಕೇಂದ್ರಗಳ ಪೈಕಿ ಹಳೆದಾಂಡೇಲಿಯ ಕನ್ನಡ ಶಾಲೆಯಲ್ಲಿ ತೆರೆಯಲಾದ ಕೇಂದ್ರದಲ್ಲಿ ಇಂದು ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ ಪರಿಣಾಮವಾಗಿ ನೂಕು ನುಗ್ಗಲು ಉಂಟಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿರುವುದರಿಂದ ಕೇಂದ್ರದ ಸಿಬ್ಬಂದಿಗಳಿಗೆ ಕೆಲಸ ಮಾಡಲು ಕೂಡ ಅಡಚಣೆಯಾಯಿತು.