ಯಲ್ಲಾಪುರ:ತಾಲೂಕಿನಲ್ಲಿ ಮಳೆಯಿಂದ ಗ್ರಾಮೀಣ ಭಾಗದ ವಿವಿಧೆಡೆ ಹಾನಿ

ಯಲ್ಲಾಪುರ: ತಾಲೂಕಿನಲ್ಲಿ ಮಳೆಯಿಂದ ಗ್ರಾಮೀಣ ಭಾಗದ ವಿವಿಧೆಡೆ ಹಾನಿ ಉಂಟಾಗಿದೆ.
ಮದನೂರಿನ ಗೋಯಾ ಬಾಬು ಕೊಕರೆ ಹಾಗೂ ಮಾಳು ಬಾಬು ಕೊಕರೆ ಎಂಬವರಿಗೆ ಸೇರಿದ ಎರಡು ಎಮ್ಮೆಗಳು ಮೇಯಲು ಹೋದ ಸಂದರ್ಭದಲ್ಲಿ ಹಳ್ಳದಲ್ಲಿ ಬಿದ್ದು ಮೃತಪಟ್ಟಿವೆ.
ಮದನೂರಿನ ಯಲ್ಲವ್ವ ಗೋಪಾಲ ತಳವಾರ ಹಾಗೂ ತೆರೆಜಾ ರುಜಾಯ ಸಿದ್ದಿ ಅವರ ಮನೆಯ ಗೋಡೆ ಕುಸಿದಿದೆ. ಮಂಚಿಕೇರಿಯ ಉಡಚವ್ವ ಬೋವಿವಡ್ಡರ್ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ.
ಗೇರಾಳದ ನಾಗವೇಣಿ ನಾಗಪ್ಪ ಗೌಡ, ಕಿರವತ್ತಿಯ ಇಂದಿರಾನಗರದ ಲಕ್ಷ್ಮೀ ಮಂಜುನಾಥ ವಾಲ್ಮೀಕಿ ಅವರ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.