ತರಬಿಯತ್ ಎಜುಕೇಶನ್ ಸೂಸೈಟಿಯಿಂದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೊಗೇರ್ ರಿಗೆ ಸನ್ಮಾನ


ಭಟ್ಕಳ: ಉಡುಪಿ ಜಿಲ್ಲೆಯಿಂದ ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ವಿ.ಡಿ. ಮೊಗೇರ್ ಕೆ.ಇ.ಎಸ್ ರನ್ನು ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ಆಡಳಿತ ಮಂಡಳಿ ಸನ್ಮಾನಿಸಿ ಗೌರವಿಸಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ.ಡಿ. ಮೊಗೇರ್ ಭಟ್ಕಳದಲ್ಲಿ ಸ್ಥಳೀಯರು ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಮಾಡಬೇಕಾಗಿದೆ. ಶಿಕ್ಷಕರು ಹಾಗೂ ಮಕ್ಕಳ ಕೊರತೆಯಿಂದ ನಮ್ಮಲ್ಲಿ ಅನೇಕಾರು ಉರ್ದು ಶಾಲೆಗಳು ಬಂದ್ ಆಗಿವೆ. ಇದಕ್ಕಾಗಿ ಸ್ಥಳೀಯರು ಆಸಕ್ತಿ ವಹಿಸಿ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾಗುವಂತೆ ನೋಡಿಕೊಳ್ಳುವುದರ ಜೊತೆಗೆ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯದೆ ಇದ್ದವರು ಬಿ.ಇಡಿ ತರಬೇತಿ ಪಡೆದುಕೊಂಡು ಶಿಕ್ಷಣ ಇಲಾಖೆಯಲ್ಲಿ ಸೇವೆ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಖ್ಯಾತ ಉದ್ಯಮಿ ಅತಿಕುರ‍್ರಹ್ಮಾನ್ ಮುನಿರಿ, ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ಉಪಾಧ್ಯಾಕ್ಷ ಸೈಯದ್ಯ ಖುತುಬ್ ಬರ್ಮಾವರ್ ನದ್ವಿ, ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ., ಸೈಯ್ಯದ್ ಶಕೀಲ್ ಎಸ್.ಎಂ, ಸಲೀಮ್ ಸಾದಾ, ಎಂ.ಆರ್.ಮಾನ್ವಿ, ಅಝೀಝುರ‍್ರಹ್ಮಾನ್ ನದ್ವಿ, ಸಲಾಹುದ್ದೀನ್ ಎಸ್.ಕೆ,. ಮೌಲಾನ ಯಾಸೀರ್ ನದ್ವಿ ಮತ್ತಿತರರು ಉಪಸ್ಥಿತರಿದ್ದರು