ದಾಂಡೇಲಿಯಲ್ಲಿ ಬಾಯ್ತೆರೆದ ಸಾರ್ವಜನಿಕ ಶೌಚಾಲಯದ ಸೆಪ್ಟಿಕ್ ಚೆಂಬರ್ನೊಳಗೆ ಬಿದ್ದ ಕರು

ದಾಂಡೇಲಿ : ನಗರದ ಸುಭಾಷನಗರದಲ್ಲಿರುವ ಹನುಮಾನ್ ದೇವಸ್ಥಾನದ ಹಿಂಬದಿ ಇರುವ ಸಾರ್ವಜನಿಕ ಶೌಚಾಲಯದ ಸೆಪ್ಟಿಕ್ ಚೆಂಬರ್ ಬಾಯ್ತೆರೆದುಕೊಂಡು ವರ್ಷ ಕಳೆದರೂ ಇನ್ನೂ ದುರಸ್ತಿಯಾಗದ ಹಿನ್ನಲೆಯಲ್ಲಿ ಕರುವೊಂದು ಆಕಸ್ಮಿಕವಾಗಿ ಸೆಪ್ಟಿಕ್ ಚೆಂಬರಿನೊಳಗೆ ಬಿದ್ದು, ಮೇಲಕ್ಕೆ ಬರಲಾಗದೇ ಒದ್ದಾಡುತ್ತಿರುವ ಸ್ಥಿತಿ ನಿರ್ಮಾಣವಾಗಿತ್ತು. ಸೆಪ್ಟಿಕ್ ಚೆಂಬರ್ ಬಾಯ್ತರೆದುಕೊಂಡಿದ್ದು, ಇನ್ನೂ ದುರಸ್ತಿಗೆ ಕ್ರಮ ಕೈಗೊಳ್ಳದಿರುವುದರಿಂದ ಈ ದುರಂತ ಸಂಭವಿಸಿದೆ. ಸ್ಥಳೀಯ ಗೋಪ್ರೇಮಿಗಳು ಕರುವನ್ನು ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.