ದಾಂಡೇಲಿ-ಜೋಯಿಡಾ ಮುಖ್ಯ ರಸ್ತೆಯ ಬಾಮಣಗಿ ಕ್ರಾಸ್ ಹತ್ತಿರ ಧರೆಗುರುಳಿದ ಬೃಹತ್ ಗಾತ್ರದ ಆಲದ ಮರ- ಸಂಚಾರ ಸ್ಥಗಿತ

ದಾಂಡೇಲಿ : ದಾಂಡೇಲಿ-ಜೋಯಿಡಾ ಮುಖ್ಯ ರಸ್ತೆಯಲ್ಲಿ ಬರುವ ಬಾಮಣಗಿ ಕ್ರಾಸ್ ಹತ್ತಿರ ಸರಿ ಸುಮಾರು ನೂರು ವರ್ಷಗಳಷ್ಟು ಹಳೆಯದಾದ ಬೃಹತ್ ಆಲದ ಮರವೊಂದು ಧರೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಇಂದು ಗುರುವಾರ ಬೆಳಿಗ್ಗೆ ನಡೆದಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮರ ಧರೆಗುರುಳಿದೆ. ಮರ ರಸ್ತೆಗೆ ಉರುಳಿದ ಪರಿಣಾಮವಾಗಿ ಸಂಚಾರ ಸ್ಥಗಿತಗೊಂಡಿದೆ. ಮರ ಬಿದ್ದ ತಕ್ಷಣವೆ ವಿರ್ನೋಲಿ ವಲಯಾರಣ್ಯಾಧಿಕಾರಿ ಸಂಗಮೇಶ್ ಪಾಟೀಲ್ ಅವರು ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಗೋವಿಂದ ಭಂಡಗಿ, ಅಶೋಕ್, ಬಾಬಾಜಾನ್ ಅವರ ನೇತೃತ್ವದೊಂದಿಗೆ ಸ್ಥಳೀಯರ ಸಹಕಾರದಲ್ಲಿ ಮರದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳದಲ್ಲಿ ಪ್ರಧಾನಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಆರೀಶ ಖಾದರ್ ಅವರು ಉಪಸ್ಥಿತರಿದ್ದು, ತೆರವು ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.