ನಿವೃತ್ತ ಅಬಕಾರಿ ಉಪ ನಿರೀಕ್ಷಕರಾದ ಶ್ರೀಕಾಂತ ಅಸೋದೆಯವರಿಗೆ ಅತ್ಯುತ್ತಮ ಕರ್ತವ್ಯ ಪಾಲನಾ ರಾಜ್ಯ ಪ್ರಶಸ್ತಿ

ದಾಂಡೇಲಿ : ಅಬಕಾರಿ ಇಲಾಖೆಯಲ್ಲಿ ಉಪ ನಿರೀಕ್ಷಕರಾಗಿ ಸೇವೆ ಸಲ್ಲಿಸಿ, ಇತ್ತೀಚಿಗೆ ನಿವೃತ್ತರಾದ ದಾಂಡೇಲಿಯ ಸುಭಾಸನಗರದ ನಿವಾಸಿ ಶ್ರೀಕಾಂತ ಅಸೋದೆಯವರು ಅತ್ಯುತ್ತಮವಾದ ಕಾರ್ಯನಿರ್ವಹಣೆಗಾಗಿ ಅತ್ಯುತ್ತಮ ಕರ್ತವ್ಯ ಪಾಲನಾ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ ಈ ರಾಜ್ಯ ಪ್ರಶಸ್ತಿಯನ್ನು ಬಾಗಲಕೋಟೆಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಶ್ರೀಕಾಂತ ಅಸೋದೆಯವರಿಗೆ ಪ್ರಧಾನ ಮಾಡಲಾಯಿತು. ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ ಶ್ರೀಕಾಂತ ಅಸೋದೆಯವರನ್ನು ನಗರದ ಗಣ್ಯರನೇಕರು ಅಭಿನಂದಿಸಿದ್ದಾರೆ.