ಮಳೆ ನಿಂತರೂ ನಿಲ್ಲದ ಅವಾಂತರ

ಕುಮಟಾ : ತಾಲೂಕಿನಲ್ಲಿ ಮಳೆ ಕಡಿಮೆಯಾದರೂ ಮಳೆಯ ಅವಘಡಗಳು ಮುಂದುವರೆದಿದೆ. ಕಲಭಾಗದಲ್ಲಿ ಮನೆಯ ಛಾವಣಿಯೊಂದು ಕುಸಿದ ಪರಿಣಾಮ ಮನೆಯೊಳಗಿದ್ದ ವ್ಯಕ್ತಿಯ ತಲೆಗೆ ಪೆಟ್ಟು ಬಿದ್ದು, ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ..

ತಾಲೂಕಿನ ಕಲಭಾಗದಲ್ಲಿ ರಾಧಾ ಕೃಷ್ಣ ಭಂಡಾರಿಯವರ ಮನೆಯ ಛಾವಣಿಯು ಭಾಗಶಃ ಕುಸಿದು ಹಾನಿ ಸಂಭವಿಸಿದೆ. ಮನೆಯ ಕೋಣೆಯಲ್ಲಿದ್ದ ಅವರ ಪುತ್ರ ನೀಲೇಶ ಕೃಷ್ಣ ಭಂಡಾರಿ ಅವರ ತಲೆ ಮೇಲೆ ಹೆಂಚು ಬಿದ್ದ ಪರಿಣಾಮ ತಲೆಗೆ ಗಾಯವಾಗಿದ್ದು ಗಾಯಗೊಂಡ ನೀಲೇಶನನ್ನು ತಕ್ಷಣ ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಛಾವಣಿ ಕುಸಿತದಿಂದ ಅಂದಾಜು 50 ಸಾವಿರ ರೂ. ಹಾನಿ ಉಂಟಾಗಿರುವುದೆಂದು ಅಂದಾಜಿಸಲಾಗಿದೆ.