40 ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಖಾಕಿ ಬಲೆಗೆ.!

ಮುಂಡಗೋಡ: ಹಲವು ಕಡೆ ಮನೆಗಳ್ಳತನ ಹಾಗೂ 40 ಕ್ಕೂ ಹೆಚ್ಚು ಕಳ್ಳತನ ಆರೋಪವಿರುವ ಖದೀಮನನ್ನ ಕಂಬಿಹಿAದೆ ಕಳಿಸುವಲ್ಲಿ ಮಂಗಳವಾರ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾವೇರಿಯ ಹುಲಗನಕೊಪ್ಪ ಗ್ರಾಮದ ಅನಿಲ ಶಿವಪ್ಪ ಭೋವಿ ವಡ್ಡರ ಎಂಬಾತನೆ ಬಂಧಿತ ಆರೋಪಿಯಾಗಿದ್ದು ಬಂಧಿತನಿಂದ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.

ಈತ ಕಾತೂರ ಗ್ರಾಮದ ಸಿರಾಜ್ ಬೊಮ್ಮನಳ್ಳಿ ಎಂಬುವವರ ಮನೆ ಮುಂದಿದ್ದ ಬೈಕ್‌ನ್ನು 2021ರ ಜೂನ್ 5 ರಂದು ಕಳ್ಳತನ ಮಾಡಿದ್ದ. ಅಲ್ಲದೇ ಬೈಕ್ ನೊಂದಣಿಯನ್ನು ಕೂಡಾ ಬದಲಿಸಿದ್ದ ಎನ್ನಲಾಗಿದೆ. ಜೊತೆಗೆ ಮನೆ ಕಳ್ಳತನಕ್ಕೂ ಇದೆ ವಾಹನ ಬಳಸುತ್ತಿದ್ದ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಈತ 40 ಕ್ಕೂ ಹೆಚ್ಚು ಮನೆ ಕಳ್ಳತನ, ಮೊಬೈಲ್ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್, ಹೆಚ್ಚುವರಿ ಎಸ್.ಪಿ ಎಸ್ ಬದರಿನಾಥ, ಡಿ.ವಾಯ್.ಎಸ್.ಪಿ ರವಿ ನಾಯ್ಕ, ಸಿಪಿಐ ಸಿದ್ದಪ್ಪ ಸಿಮಾನಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಮುಂಡಗೋಡ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.