ಸೋದರ ಸಂಬಂಧಿಗಳ ನಡುವೆ ನಡೆದ ಜಗಳ; ಮಧ್ಯೆ ಬಂದ ಮೂರನೇ ವ್ಯಕ್ತಿ ಸಾವು

ಬೆಂಗಳೂರು: ಸೋದರ ಸಂಬಂಧಿಗಳ ನಡುವೆ ನಡೆದ  ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಗೋಪಾಲಪುರದಲ್ಲಿ ನಡೆದಿದೆ. ಸೋನು‌ (35) ಕೊಲೆಯಾದ ವ್ಯಕ್ತಿ. ಈ ಹಿಂದೆ ಮೃತನ ಸಹೋದರ ಅಕ್ರಮ್ ಜೊತೆ ಫಾರೂಕ್ ಜಗಳ ಮಾಡಿಕೊಂಡಿದ್ದ. ಈ ವೇಳೆ ಅಕ್ರಮ್, ಫಾರೂಕ್​ ಪತ್ನಿ ವಿಚಾರವಾಗಿ ಅವಾಚ್ಯ ಶಬ್ದದಿಂದ ನಿಂದಿಸಿದ್ದ. ಬಳಿಕ ಜಗಳ ಹೆಚ್ಚಾಗಿದ್ದು, ಮಾವ ರಿಯಾಜ್ ಗಲಾಟೆ ತಡೆಯಲು ಎಂಟ್ರಿ ಕೊಟ್ಟಿದ್ದನು. ಈ ವೇಳೆ ಗೋಪಾಲಪುರದ ಗುಜುರಿ ಅಂಗಡಿಗೆ ಸಂಧಾನ ಮಾಡುಲು ಕರೆಸಿದ್ದ ವೇಳೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಸೋದರ ಸಂಬಂಧಿ ಫಾರೂಕ್​ನಿಂದ ಕೃತ್ಯ

ಇನ್ನು ಮಾವನಿಂದ ಮಧ್ಯಸ್ಥಿಕೆ ವಹಿಸಿ ರಾಜಿ ಸಂಧಾನಕ್ಕೆ ಯತ್ನಿಸಲು ಕರೆಸಿದ್ದ ವೇಳೆ ಅಕ್ರಮ್ ಜೊತೆ ಆತನ ತಮ್ಮ ಸೋನು ಸಹ ಬಂದಿದ್ದ. ಬಳಿಕ ಅಕ್ರಮ್, ಫಾರೂಕ್ ನಡುವಿನ ಜಗಳ ಸಂಧಾನವಾಗಿತ್ತು. ಈ ಮಧ್ಯೆ ಅಕ್ರಮ್ ತಮ್ಮ ಸೋನು ಫಾರೂಕ್​ಗೆ ನಿಂದನೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಫಾರೂಕ್ ರಾಡ್​ನಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದ. ತಲೆಗೆ ಬಿದ್ದ ಒಂದೇ ಏಟಿಗೆ ನೆಲಕ್ಕೆ ಬಿದ್ದಿದ್ದ ಸೋನು. ಆಸ್ಪತ್ರೆಗೆ ಸಾಗಿಸಿದರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಸದ್ಯ ಆರೋಪಿ ಫಾರೂಕ್​ನನ್ನ ಪೊಲೀಸರು ಬಂಧಿಸಿದ್ದು, ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.