ದೇಶ ಸುಭದ್ರವಾಗಿದ್ರೆ ಮಾತ್ರ ಎಲ್ಲಾ ಧರ್ಮಗಳು ಉಳಿಯಲು ಸಾಧ್ಯ – ಸುಭುದೇಂದ್ರ ಶ್ರೀ

ರಾಯಚೂರು: ದೇಶದ ಗಡಿ ರಕ್ಷಣೆಗಾಗಿ ಸಾಕಷ್ಟು ಯೋಧರು ತಮ್ಮ ಜೀವನವನ್ನೇ ತ್ಯಜಿಸಿದ್ದಾರೆ
ದೇಶ ಸುಭದ್ರವಾಗಿದ್ರೆ ಎಲ್ಲಾ ಧರ್ಮಗಳು, ಆಚಾರ ವಿಚಾರ, ಉಳಿಯೋದಕ್ಕೆ ಸಾಧ್ಯ ಎಂದು ಮಂತ್ರಾಲಯದಲ್ಲಿ ಶ್ರೀ ಸುಭುದೇಂದ್ರ ತೀರ್ಥರು ಹೇಳಿದ್ದಾರೆ.

ಇಂದು ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ಮಂತ್ರಾಲಯ ಮಠದ ಶ್ರೀಗಳು ಮಾತನಾಡಿ ಯೋಧರು ತನು, ಮನ, ಪ್ರಾಣ, ಕುಟುಂಬ, ಜೀವನ, ಸುಖಗಳನ್ನು ತ್ಯಾಗ ಮಾಡುತ್ತಾರೆ. ಹೀಗೆ ಸರ್ವಸ್ವವನ್ನೂ ತ್ಯಾಗ ಮಾಡಿ, ದೇಶದ ರಕ್ಷಣೆಗೆ ನಿಲ್ಲೊ ಯೋಧರು ಅಭಿನಂದನೆಗೆ ಅರ್ಹರಾಗಿದ್ದಾರೆ. ಸೈನಿಕರು ಇಹ ಲೋಕವನ್ನ ಪಂಚಭೂತಗಳಿಂದ ದೂರವಾದರೂ ಅವರ ತ್ಯಾಗ ಶಾಶ್ವತವಾಗಿ ಉಳಿಯುತ್ತದೆ ಎಂದು ಶ್ರೀಗಳು ಹೇಳಿದರು.