ಮಳೆ ಅಬ್ಬರಕ್ಕೆ ಮುಳುಗಡೆಯಾದ ಸೇತುವೆ: ಕೆಲ ತಾಂಡಾಗಳ ಸಂಪರ್ಕ ಕಡಿತ

ಕಲಬುರಗಿ: ಚಿಂಚೋಳಿ ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದ್ದು ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಧರ್ಮಾಸಾಗರ ಮತ್ತು ಶೇರಿ ಭಿಕನಳ್ಳಿ ತಾಂಡಾ ನಡುವೆ ಸಂಪರ್ಕ ಕಡಿತಗೊಂಡಿದೆ. ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.

ಸಣ್ಣ ಸೇತುವೆ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಬೇರೆ ಕಡೆಗೆ ಹೋಗಲು ರಸ್ತೆ ಸಂಪರ್ಕವಿಲ್ಲದೆ ಜನ ಪರದಾಡುತ್ತಿದ್ದಾರೆ. ಅಪಾಯವಿದ್ರು ಕೆಲವರು ಸೇತುವೆ ಮೇಲೆ ನಡೆದುಕೊಂಡೇ ಹಳ್ಳ ದಾಟುತ್ತಿದ್ದಾರೆ.