ಯಲ್ಲಾಪುರ:ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದ್ದು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಸೈಯ್ಯದ್ ಬಶೀರ್ ಸೈಯ್ಯದ್ ನಜೀರ ಆಗ್ರಹ

ಅವರು ಈ ಕುರಿತು ಶನಿವಾರ ಗ್ರೇಡ್ ೨ ತಹಶಿಲ್ದಾರ ಸಿ.ಜಿ.ನಾಯ್ಕ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಪಟ್ಟಣದ ಮೀನು ಮಾರುಕಟ್ಟೆ ಯ ಬಳಿ ಇಪ್ಪತೈದಕ್ಕೂ ಹೆಚ್ಚು ಬೀದಿನಾಯಿಗಳು ಬೀಡು ಬಿಟ್ಟಿದ್ದು,ಇದರಿಂದ ಮೀನುಮಾರಕಟ್ಟೆಗೆ ಬರುವ ಗ್ರಾಹಕರಿಗೆ, ವ್ಯಾಪಾರಸ್ಥರಿಗೆ ತೊಂದರೆ ಉಂಟಾಗುತ್ತಲಿದೆ.ಗ್ರಾಹಕರ ಮೇಲೆ ಎರಗುವುದು, ಕಚ್ಚಾಡುವುದು ನಡೆಸುತ್ತಿವೆ.ಇದರಿಂದ ಗ್ರಾಹಕರು ಕಿರಿಕಿರಿ ಪಡುತ್ತಿದ್ದಾರೆ.ಇದೇ ರೀತಿ,ನೂತನನಗರ,ಉಧ್ಯಮನಗರದ ನಾಗರಿಕರು ಬೀದಿನಾಯಿಗಳ ಹಾವಳಿಯಿಂದ ತೊಂದರೆ ಎದುರಿಸುತ್ತಿದ್ದಾರೆ. ಶಾಲೆಗೆ ತೆರಳುವ ಚಿಕ್ಕ ಮಕ್ಕಳು ನಾಯಿ ಉಪಟಳದಿಂದ ಅಂಜುತ್ತಿದ್ದಾರೆ.ಕಾರಣ ಬೀದಿನಾಯಿಗಳ ಹಿಡಿದು ಬೇರೆಡೆ ಸಾಗಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.