ಪೊಲೀಸರಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆ ಕಿಟಕಿ ಗಾಜು ಒಡೆದು ಜಿಗಿದ ಆರೋಪಿ: ಓಡಲು ಆಗದೇ ಸಿಕ್ಕಿಬಿದ್ದ

ಆನೇಕಲ್: ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಯೊಬ್ಬ ಆಸ್ಪತ್ರೆಯ ಕಿಟಕಿ ಒಡೆದು ಜಂಪ್ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಸಿನಿಮೀಯ ರೀತಿಯಲ್ಲಿ ರಾಬರಿ ಕೇಸ್ ಆರೋಪಿ ಮಹಡಿ ಮೇಲಿಂದ ಹಾರಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಆದ್ರೆ ಆರೋಪಿಗೆ ಗಂಭೀರ ಗಾಯಗಳಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

2 ವರ್ಷದ ಹಿಂದಿನ ರಾಬರಿ ಕೇಸ್​ನಲ್ಲಿ ಆರೋಪಿ ಚೇತನ್​ಗೆ ವಾರಂಟ್ ಜಾರಿ ಆಗಿತ್ತು. ಹೀಗಾಗಿ ಪೊಲೀಸರು ಆರೋಪಿಯನ್ನು ಬಂಧಿಸಿ ನಿನ್ನೆ (ಜೂನ್ 25) ಬೆಳಗ್ಗೆ 11 ಗಂಟೆಗೆ ಮೆಡಿಕಲ್‌ ಚೆಕಪ್​ಗೆಂದು ಆನೇಕಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಆರೋಪಿ ಚೇತನ್ ಸಿನಿಮೀಯ ರೀತಿಯಲ್ಲಿ ಆಪರೇಷನ್ ಥಿಯೇಟರ್​ನಿಂದ ಗಾಜು ಒಡೆದು ಪರಾರಿಗೆ ಯತ್ನಿಸಿದ್ದಾನೆ. ಆದ್ರೆ ಮಹಡಿ ಮೇಲಿಂದ ಜಂಪ್ ಮಾಡಿದ ಕಾರಣ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.