ಹಳದೀಪುರದ ಆರ್.ಇ.ಎಸ್ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮ

ದಿನಾಂಕ 24 – 6 – 2023 ಶನಿವಾರ ಆರ್ ಈ ಎಸ್ ಸಂ ಪ ಪೂ ವಿದ್ಯಾಲಯ ಹಳದೀಪುರದಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ಪ್ರತಿಬಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಏರ್ಪಡಿಸಲಾಯಿತು.
ಈ ಕಾರ್ಯಕ್ರಮ ವನ್ನು ಲೀಲಾಗಣ ಪತಿ ಚಾರಿಟೇಬೆಲ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಜಿ ಜಿ ಸಭಾಹಿತ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, “ಗ್ರಾಮೀಣ ಪ್ರದೇಶದ
ಮಕ್ಕಳು 10ನೇ ತರಗತಿಯಲ್ಲಿ- 10 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ ದ್ವಿತೀಯ ಪಿಯುಸಿಯಲ್ಲಿ 3 ವಿದ್ಯಾರ್ಥಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ನಮ್ಮ ವಿದ್ಯಾಲಯಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ ಇಂತಹ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಸೌಭಾಗ್ಯ ನನಗೆ ಸಂತೋಷ ತಂದಿದೆ..” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಆರ್ ಈ ಸೊಸೈಟಿಯ ಅಧ್ಯಕ್ಷರಾದ ಶ್ರೀ ಜಿ ಸಿ ನಾಯ್ಕ ಮಾತನಾಡಿ, “ಶಿಕ್ಷಕರ ಶ್ರಮದಿಂದ ಈ ವರ್ಷ ನಮ್ಮ ವಿದ್ಯಾಲಯಕ್ಕೆ 10ನೇ ತರಗತಿಯಲ್ಲಿ ಶೇಕಡಾ 96.36% ಫಲಿತಾಂಶದೊಂದಿಗೆ ತಾಲೂಕಿಗೆ 5 ನೇ ಸ್ಥಾನ ಪಡೆದಿರುವುದು ಸಂತಸ ತಂದಿದೆ..” ಎಂದರು. ಈ ಸಮಾರಂಭದಲ್ಲಿ ಆರ್ ಈ ಸೊಸೈಟಿ ಕಾರ್ಯದರ್ಶಿಗಳು ಅರ್ಬನ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೀವ್ ಶಾನಭಾಗ ರವರು ಉಪಸ್ಥಿತರಿದ್ದರು.RES ಆಡಳಿತ ಮಂಡಳಿಯ ಉಪಾದ್ಯಕ್ಷರು ಶ್ರೀಮತಿ ಉಮಾರಾವ್ , ಆಡಳಿತ ಮಂಡಳಿಯ ಸದಸ್ಯರುಗಳಾದ ಶ್ರೀ ದಾಮೋದರ ಜಿ ನಾಯ್ಕ , ಶ್ರೀವಿನಾಯಕ ನಾಯ್ಕ , ಶ್ರೀ ಅಶೋಕ ನಾಯ್ಕ,ಶ್ರೀ ಗಣೇಶ ಪೈ , ಶ್ರೀ ಶಿವಾನಂದ ನಾಯ್ಕ, ಶ್ರಿ ರತ್ನಾಕರ ನಾಯ್ಕ ಉಪಸ್ಥಿತರಿದ್ದರು. ದಾನಿಗಳಾದ ಶ್ರೀ. ಪ್ರದೀಪ ಎಸ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು ವಿದ್ಯಾರ್ಥಿ ಪೋಷಕರಾದ ಶ್ರೀಪ್ರಕಾಶ ದೇಶ ಭಂಡಾರಿ ಎಲ್ಲಾ ಪಾಲಕರ ಮತ್ತು ವಿದ್ಯಾರ್ಥಿಗಳ ಪರವಾಗಿ ಎಲ್ಲಾ ಶಿಕ್ಷಕ ಸಿಬ್ಬಂದಿಗಳನ್ನು ಸನ್ಮಾನಿಸಿದರು ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಶ್ರೀ ವಿ ಎಸ್ ನಾಯ್ಕ ಉಪಸ್ಥಿತರಿದ್ದರು. ಮುಖ್ಯಾದ್ಯಾಪಕ ಶ್ರೀಎಸ ಎಚ ಪೂಜಾರ ಸರ್ವರನ್ನು ಸ್ವಾಗತಿಸಿದರು ಶ್ರೀ ಚಂದ್ರಪ್ಪ ಅಣ್ಣಪ್ಪನವರ ಕಾರ್ಯಕ್ರಮ ನಿರೂಪಿಸಿದರು.. ಶ್ರೀ ಉಮೇಶಗೌಡ ವಂದಿಸಿದರು.