ಈ ತಿಂಗಳ ಪಡಿತರ ಪಡೆಯಲು ಜೂನ್:27 ಕೊನೆಯ ದಿನ : ಗೋಪಿ ಚೌವ್ಹಾಣ್

ದಾಂಡೇಲಿ : ತಾಲ್ಲೂಕಿನ ಪಡಿತರದಾರರಿಗೆ ಈ ತಿಂಗಳ ಪಡಿತರವನ್ನು ಪಡೆಯಲು ಜೂನ್:27 ರಂದು ಕಡೆಯ ದಿನವಾಗಿರುತ್ತದೆ. ಈ ನಿಟ್ಟಿನಲ್ಲಿ ಈ ತಿಂಗಳ ಪಡಿತರವನ್ನು ಜೂನ್ :27 ರೊಳಗೆ ತಮ್ಮ ತಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆದುಕೊಳ್ಳುವಂತೆ ದಾಂಡೇಲಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಆಹಾರ ನಿರೀಕ್ಷಕರಾದ ಗೋಪಿ ಚೌವ್ಹಾಣ್ ಅವರು ಇಂದು ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಜೂನ್:28 ರಿಂದ ಇಲಾಖೆಯ ಸರ್ವರ್ ನಿರ್ವಹಣಾ ಕಾರ್ಯ ಕೈಗೊಳ್ಳಲಿದ್ದು ಈ ತಿಂಗಳ 28, 29 ಮತ್ತು 30 ರಂದು ಪಡಿತರ ವಿತರಣಾ ಕಾರ್ಯ ಇರುವುದಿಲ್ಲ. ಆದ್ದರಿಂದ ಪಡಿತರದಾರರು ಜೂನ್:27 ರೊಳಗೆ ಪಡಿತರವನ್ನು ಪಡೆದುಕೊಳ್ಳುವಂತೆ ಗೋಪಿ ಚೌವ್ಹಾಣ್ ಅವರು ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.