ಚಿನ್ನಾಪುರ ಶಾಲೆಯಲ್ಲಿ ವನಮಹೋತ್ಸವ ಆಚರಣೆ

ಯಲ್ಲಾಪುರ: ತಾಲೂಕಿನ ಚಿನ್ನಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ನಿವೃತ್ತ ವನಪಾಲಕ ನಾಗೇಶ ನಾಯಕ ಶಾಲಾ ಆವಾರದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ‘ಪ್ರಾಣವಾಯು ನೀಡುವ ಹಸಿರನ್ನು ಕಾಪಾಡುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಪರಿಸರ ಕಾಯ್ದುಕೊಂಡರೆ ಮಾತ್ರ ಅದು ನಮ್ಮನ್ನು ಕಾಯುತ್ತದೆ’ ಎಂದರು.

ಸಾಹಿತಿ ಸುಬ್ರಾಯ ಬಿದ್ರೆಮನೆ ಅಧ್ಯಕ್ಷತೆ ವಹಿಸಿ ‘ಪರಿಸರದ ಪ್ರೀತಿ ಬಾಲ್ಯದಲ್ಲಿಯೇ ಬೆಳೆಯಬೇಕೆಂಬ ನೆಲೆಯಲ್ಲಿ ಶಾಲಾ ಆವಾರದಲ್ಲಿ ವನಮಹೋತ್ಸವ ಮಾಡಲಾಗಿದೆ. ನೆಟ್ಟಗಿಡ ಪೋಷಿಸುವ ಕಾಳಜಿ ಮಕ್ಕಳಲ್ಲಿ ಬಂದರೆ ಸಾರ್ಥಕತೆ ಎನಿಸುತ್ತದೆ’ ಎಂದರು.

ಪ್ರಮುಖರಾದ ವಾಮನ ದೇವಳಕರ, ವಿಶ್ವನಾಥ ಭಟ್ಟ, ಶಿಕ್ಷಕರಾದ ಈಶ್ವರ ಪಟಗಾರ, ದಿನೇಶ ಭಟ್ಟ ಉಪಸ್ಥಿತರಿದ್ದರು.