ಶಿರಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೊಸ ಆಂಬುಲೆನ್ಸ್

ಭಟ್ಕಳ: ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರಾದ ಹೊಸ ಆಂಬುಲೆನ್ಸ್ ನ್ನು ಶಾಸಕ ಸುನೀಲ ನಾಯ್ಕ ಜನರ ಸೇವೆಗಾಗಿ ನೀಡಿದರು. ಖುದ್ದು ಅಂಬ್ಯುಲೆನ್ಸ್ ಚಾಲನೆ ಮಾಡಿ ಶಾಸಕರು ಎಲ್ಲರ ಗಮನ ಸೆಳೆದರು.

ಈ ವೇಳೆ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ. ಬಾಲಚಂದ್ರ ಮೇಸ್ತಾ ಭಟ್ಕಳ ತಾಲೂಕಾ ಆಸ್ಪತ್ರೆ, ಅಥವಾ ಖಾಸಗಿ ಅಂಬ್ಯುಲೆನ್ಸನ್ನೆ ನಂಬಿಕೊಂಡಿರುವ ಶಿರಾಲಿ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದರು.

ಆಂಬುಲೆನ್ಸ್ ನೀಡಲು ಸಹಕರಿಸಿದ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಹಾಗೂ ಶಾಸಕ ಸುನೀಲ ನಾಯ್ಕ ಅವರಿಗೆ ವೈದ್ಯಾಧಿಕಾರಿ ಡಾ. ಬಾಲಚಂದ್ರ ಮೇಸ್ತಾ ಹಾಗೂ ವೈದ್ಯರು ಮತ್ತು ಸಿಬ್ಬಂದಿಗಳು ಧನ್ಯವಾದ ಸಲ್ಲಿಸಿದರು.